ಪಾಲಾರ್ ಪತ್ರಿಕೆ | Palar Patrike
ದೇವನಹಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆಯು ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಶಾಲಾ ಮಕ್ಕಳ ಸ್ಪರ್ದೆಯಲ್ಲಿ ಪ್ರತಿಷ್ಠಿತ ರಾಯಲ್ ಶಾಲೆಯ ವಿದ್ಯಾರ್ಥಿಯಾದ ಕಾರುಣ್ಯ ಯೋಗಾಸನ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಈ ಪಂದ್ಯಾವಳಿಯನ್ನು ಎಂ.ವಿ. ಎಂ ಶಾಲೆ ಕನ್ನಮಂಗಲ (ತಾ) ದೇವನಹಳ್ಳಿಯಲ್ಲಿ ದಿನಾಂಕ: 03.12.2022 ರಂದು ನಡೆಯಲಾಗಿದ್ದು, ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ವಿದ್ಯಾರ್ಥಿಯನ್ನು ಹಾಗೂ ದೈಹಿಕ ಶಿಕ್ಷಕರಾದ ಶ್ರೀನಿವಾಸ್ ರವರನ್ನು ಶಾಲೆಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಕೆ, ಕಾರ್ಯದರ್ಶಿ ಶ್ರೀಮತಿ ಪ್ರೇಮಲತ ಕೆ ಆರ್ ರವರು ಹೃದಯ ಪೂರ್ವಕವಾಗಿ ಅಭಿನಂದಿಸಿದ್ದಾರೆ.