ಪಾಲಾರ್ ಪಾತ್ರಿಕೆ | Palar pathrike
ರಾಷ್ಟ್ರಕ ವಿಕುವೆಂಪು ಅವರು ವಿಶ್ವಪ್ರಜ್ಞೆಯ ಲೇಖಕರಾಗಿದ್ದರು. ಮೌಢ್ಯವನ್ನು ಬಂಗಾಲದಲ್ಲಿ ವಿರೋಧಿಸಿದ ಸ್ವಾಮಿವಿವೇಕಾನಂದರAತೆ ಕನ್ನಡನಾಡಿನಲ್ಲೂ ಮೌಢ್ಯ ವಿರುದ್ಧ ಗಟ್ಟಿದನಿ ಎತ್ತಿದವರು ಕುವೆಂಪು ಅವರು ಎಂದು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀಶಂಕ ರ್ಎಸ್ಎನ್ ಅವರು ಹೇಳಿದರು. ಆಕ್ಟರ್ಸಸ್ಟುಡಿಯೋ, ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ ಜಲಗಾರ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ವೈರುಧ್ಯಗಳಿಗೆ ವೈಚಾರಿಕತೆಯೇಮದ್ದು ಎಂಬುದನ್ನು ನಾಟಕದ ಪಾತ್ರಗಳ ಮೂಲಕ ಹೊರ ಹಾಕಿದ್ದಾರೆ ಎಂದರು. ಜಾತಿ, ಮತ, ಧರ್ಮಗಳ ಸಂಕೋಲೆಯನ್ನು ಮೀರಿ ಮಾನವತ್ವವನ್ನು ಪ್ರತಿಪಾದಿಸಿದ್ದ ಕುವೆಂಪು ಅವರು ಎದೆಗೂಡು ಎಂಬ ಗುಡಿಯಲ್ಲಿರು ವದೇವರನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು ಎಂದು ಕರೆನೀಡಿದ್ದರು. ಹಾಗೆಯೇ ಸಮಾನತೆಯನ್ನುತರುವ, ದಬ್ಬಾಳಿಕೆಯನ್ನು, ಶೋಷಣೆಯನ್ನುನಿಗ್ರಹಿಸುವ, ಮೌಢ್ಯತೆಯನ್ನು ತೊಡೆದು ಹಾಕುವ ನಾಟಕಗಳನ್ನು ರಚಿಸಿ ರಾಷ್ಟ್ರಕವಿ ಯಾದರು ಎಂದು ಶಂಕರ್ ಅವರು ಹೇಳಿದರು. ಸ್ವಚ್ಚತೆಯ ರಾಯಭಾರಿಗಳಾ ಪೌರಕಾರ್ಮಿಕರನ್ನು ಜಲಗಾರ ಎಂಬAತೆ ಚಿತ್ರಿಸಿರುವ ಕುವೆಂಪು, ಅಸ್ಪೃಶ್ಯತೆಯ ಪರಾಕಾಷ್ಠೆಯ ಸಮಯದಲ್ಲಿ ಜಲಗಾರನನ್ನು ಶಿವನದೇವಾಲಯದ ಒಳಗೆ ಬಿಡದಿದ್ದಾಗ ಕುಳಿತಲ್ಲೇ ಶಿವನನ್ನು ಧ್ಯಾನಿಸಿ ದೇವರನ್ನು ಪ್ರತ್ಯಕ್ಷವಾಗಿಕಂಡದನ್ನು ಈನಾಟಕದಲ್ಲಿ ತೋರಿಸಿದ್ದಾರೆ ಎಂದರು. ಆಠಿರ್ಸ್ಸ್ಟುಡಿ ಯೋದಲ್ಲಿ ಸತತ 45 ದಿನಗಳ ಕಾಲ ತರಬೇತಿ ಪಡೆದ ವಿದ್ಯಾರ್ಥಿಗಳು ಜಲಗಾರ ನಾಟಕವನ್ನು ಪ್ರದರ್ಶಿಸಿದರು. ರಂಗಕರ್ಮಿ ರಾಜೇಶ್ಸಾಣೇಹಳ್ಳಿ, ಕಿರುತೆರೆ ನಟಿ ಮಾಲತಿಗೌಡ ಹೊನ್ನಾವರ, ಬಿಗ್ಬಾಸ್ಸ್ಪರ್ಧಿ ವಿನೋದ್ಗೊಬ್ಬರಗಾಲ, ನಟ ಮಹಾಂತೇಶ್ಹಿರೇಮಠ, ಅಕ್ಷಯ್ನಾಯಕ್ಸೇರಿದಂತೆ ಹಲವು ರಂಗಕರ್ಮಿಗಳು, ನಾಟಕಕಾರರು ಉಪಸ್ಥಿತರಿದ್ದರು.