ಪಾಲಾರ್ ಪಾತ್ರಿಕೆ | Palar Pathrike
ದೇವನಹಳ್ಳಿ: ಡಿ.18ರಂದು ಬಿಜೆಪಿ ಪ್ರಕೋಷ್ಠಗಳ ಮೂಲಕ ರಾಜ್ಯದಲ್ಲಿ ಸಂರಚನೆಗೊAಡಿರುವ ಒಟ್ಟು 24 ಪ್ರಕೋಷ್ಠಗಳ ಸಮಾವೇಶವನ್ನು ವಿವಿಧ ಹಂತಗಳಲ್ಲಿ ಜವಾಬ್ದಾರಿಯನ್ನು ನೀಡುವ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ರಾಜ್ಯ ಬಿಜೆಪಿ ಸಂಚಾಲಕ ಮತ್ತು ಹಾಲು ಉತ್ಪಾದಕ ಪ್ರಕೋಷ್ಠ ಮತ್ತು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಎಂ.ಆರ್.ವೆAಕಟೇಶ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 16,000 ದಿಂದ 18,000 ಸಾವಿರದವರೆಗೆ ಜವಾಬ್ದಾರಿ ನಿರತ ಸಮಾವೇಶದಲ್ಲಿ ಭಾಗವಹಿಸಬಹುದೆಂಬ ಅಂದಾಜಿಸಲಾಗಿದೆ. ಬಿಜೆಪಿ ಹೊರತುಪಡಿಸಿ ಬಹುಶಃ ದೇಶದ ಯಾವುದೇ ರಾಜಕೀಯ ಪಕ್ಷಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ನಿರ್ದಿಷ್ಟ ವೃತ್ತಿ ಸಮುದಾಯಗಳಿಗೆ ವ್ಯವಸ್ಥಿತವಾಗಿ ಕೊಂಡೊಯ್ದಿಲ್ಲ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಬಹುದು. ಉದಾಹರಣೆಗೆ ಹಾಲು ಉತ್ಪಾದಕರ ಪ್ರಕೋಷ್ಠ, ಅಸಂಘಟಿತ ಕಾರ್ಮಿಕರ ಪ್ರಕೋಷ್ಠ, ಸಹಕಾರ ಪ್ರಕೋಷ್ಠ, ಫಲಾನುಭವಿಗಳ ಪ್ರಕೋಷ್ಠದಂತ ಮುಂತಾದ ವಲಯಗಳ ಜನರಿಗೆ ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಂತಹ ಮತ್ತು ಆಯಾ ಸಮುದಾಯಗಳನ್ನು ಮತಗಳನ್ನಾಗಿ ಪರಿವರ್ತಿಸಬಲ್ಲಂತ ಸಾಮಥ್ಯ ಪ್ರಕೋಷ್ಠಗಳಿಗಿದ್ದು ಯಾವುದೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನಿರ್ಣಾಯಕ ಪಾತ್ರವಹಿಸುತ್ತದೆಂಬುದನ್ನು ಅಲ್ಲಗಳೆಯಲಾಗದು. ವಿಶೇಷವಾಗಿ ಈ ಸಮಾವೇಶದಲ್ಲಿ ಆಯಾ ಪ್ರಕೋಷ್ಠಗಳ ಕಾರ್ಯ ವ್ಯಾಪ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು, ತಜ್ಞರನ್ನೂ ಸಹ ಆಹ್ವಾನಿಸುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ ಎಂದರು.
ಸಂಖ್ಯಾತ್ಮಕವಾಗಿ ಗುಣಾತ್ಮಕವಾಗಿ ಈ ಸಮಾವೇಶ ನಮಗೆಲ್ಲಾ ಹೊಸ ಪ್ರೇರಣೆ, ಉತ್ಸಾಹ, ಬದ್ಧತೆ ಎಲ್ಲವನ್ನೂ ನೀಡಿ ಮತ್ತು ಜನಸಮುದಾಯದ ಮಧ್ಯೆ ಕಾರ್ಯಚಟುವಟಿಕೆ ಮಾಡಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳನ್ನು 2023ರ ಚುನಾವಣೆಯಲ್ಲಿ ಗೆಲ್ಲಿಸಿ, ಬಹುಮತದಿಂದ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮತದಾರರ ಮನವೊಲಿಸುವ ಶಕ್ತಿಯನ್ನೂ ಯುಕ್ತಿಯನ್ನೂ’ ಹಾಗೂ ಬದ್ಧತೆಯನ್ನು ಈ ಸಮಾವೇಶ ನೀಡುತ್ತದೆಂಬ ದೃಢವಾದ ವಿಶ್ವಾಸವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಂಚಾಲಕ ಎವಿಬಿಪಿ ಸರೇಶ್, ಜಿಲ್ಲಾ ಸಂಚಾಲಕ ಹಾಲು ಉತ್ಪಾಕರು ಶ್ರೀನಿವಾಸ್, ಜಿಲ್ಲಾ ಸಹ ಸಂಚಾಲಕ ರವಿಕುಮಾರ್.ಎಸ್.ಕೆ, ಪುಭುದ್ಧ ಪ್ರಕೋಷ್ಠ ಜಿಲ್ಲಾ ಸಂಚಾಲಕ ದೇ.ಸು.ನಾಗರಾಜ್, ಜಗದೀಶ್, ಮಂಜುನಾಥ್, ಅಶ್ವತ್ನಾರಾಯಣ್, ರಮೇಶ್, ಮುನಿರಾಜ್, ಅರುಣ್ಕುಮಾರ್, ಜಗದೀಶ್, ಇತರರು ಇದ್ದರು.
ಚಿತ್ರ: 13 ಡಿಹೆಚ್ಎಲ್ ಪಿ1
ದೇವನಹಳ್ಳಿ ಪಟ್ಟಣದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಸಂಚಾಲಕ ಮತ್ತು ಹಾಲು ಉತ್ಪಾದಕ ಪ್ರಕೋಷ್ಠ ಮತ್ತು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಎಂ.ಆರ್.ವೆAಕಟೇಶ್ ಮಾತನಾಡಿದರು.