ರಾಮನಗರ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವರಾದ ವಿ.ಸುನೀಲ್ ಕುಮಾರ್ ಅವರುಗಳು ಇಂದು ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ನಡೆದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಮಹಾ ಸ್ವಾಮೀಜಿ ಅವರ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳಿಗೆ ಗೌರವ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು.
ಸಚಿವ ಸುನಿಲ್ ಕುಮಾರ್ ಅವರು ಮಾತನಾಡಿ ಸೋಲೂರಿನ ನಾರಾಯಣ ಗುರು ಮಠ ಸಂಸ್ಥಾನ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಹಲವಾರು ಸಣ್ಣಪುಟ್ಟ ಹಿಂದುಳಿದ ವರ್ಗಗಳನ್ನು ಒಂದೇ ವೇದಿಕೆಯಡಿ ತರುವಂತಹ ಕೆಲಸನಡೆಸುತ್ತಿದೆ. ಹಿಂದುಳಿದ ವರ್ಗಗಳು
ಸಾಮಾಜಿಕ, ಆರ್ಥಿಕ,ಶಿಕ್ಷಣಿಕ ರಂಗದಲ್ಲಿ ಬೆಳೆಯಲು ಅಗತ್ಯ ಸಹಕಾರವನ್ನು ನೀಡುತ್ತಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ವಿಖ್ಯಾತನಂದ ಯತಿಗಳು ಪೀಠಾಧಿಪತಿಗಳಾಗುತ್ತಿದ್ದರೆ. ಇದು ಸಂತೋಷದ ಕ್ಷಣ ಎಂದು ಭಾವಿಸುತ್ತೇನೆ, ನೂತನ ಸ್ವಾಮೀಜಿಯವರ ಮಾರ್ಗದಶನದಲ್ಲಿ ಸಮಾಜ ಒಟ್ಟಾರೆಯಾಗಿ ಸಂಘಟನಾತ್ಮಕ ಚಟುವಟಿಕೆ ನಡೆಸಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ಒತ್ತು ಕೊಡುತ್ತೇನೆ ಎಂಬ ಮಾತುಗಳನ್ನು ಸ್ವಾಮೀಜಿ ಹೇಳಿದ್ದಾರೆ ಎಂದರು.