ಪಾಲಾರ್ ಪಾತ್ರಿಕೆ | Palar Pathrike ಕನಕಪುರ : ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಾಯಕನಾಗಿದ್ದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ರಿಲಾಕ್ಸ್ ಮೂಡಿನಲ್ಲಿ ಕನಕಪುರದ ನಿವಾಸದಲ್ಲಿ ವಾಸ್ಥವ್ಯ ಹೂಡಿದ್ದ ಅವರು, ಬೆಳಗಿನ ದಿನಚರಿಗಳನ್ನು ಮುಗಿಸಿ ನಗರದ ವಾಸು ಹೋಟೆಲ್ನ ದೋಸೆ ಹಾಗೂ ಇಡ್ಲಿಯನ್ನು ಸವಿದರು.
ನಗರದ ವಾಸು ಹೋಟೆಲ್ಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹೋಟೆಲ್ಗೆ ಆಗಮಿಸಿದ ಅವರಿಗೆ ಹೋಟೆಲ್ ಮಾಲೀಕರ ಪುತ್ರ ಜನಾರ್ಧನ್ ಮಲ್ಲಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಇಡ್ಲಿ ಸವಿದ ನಂತರ ಮಾಲಕರ ಒತ್ತಾಯದ ಮೇರೆಗೆ ಇಲ್ಲಿನ ಪ್ರಸಿದ್ದ ಮಸಾಲೆ ದೋಸೆಯ ರುಚಿಯನ್ನು ಸಹ ಸವಿದರು.
ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಚಂದ್ರಶೇಖರ್, ತಿಮ್ಮಪ್ಪ, ಎಂ.ಡಿ.ಅಮ್ಜದ್, ಹರೀಷ್, ಪರಮೇಶ್ ಕೌನ್ಸಲರ್ ವಿಜಿ, ವಾಸು ಹೋಟೆಲ್ ಮಾಲೀಕರಾದ ರಾಮಚಂದ್ರು ಮತ್ತು ಜನಾರ್ಧನ, ಪುಟ್ಟಮಾದು, ಗಡ್ಡತಿಮ್ಮಪ್ಪ ಹಾಜರಿದ್ದರು.