ರಾಮನಗರ: ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ತರಗತಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕೋವಿಡ್ ಸೂಕ್ತ ನಡಾವಳಿಗಳ ನಾಮಫಲಕಗಳನ್ನು ಮಕ್ಕಳಿಗೆ ಕಾಣುವ ರೀತಿಯಲ್ಲಿ ಎಲ್ಲಾ ಭಾಗಗಳಲ್ಲಿ ಪ್ರದರ್ಶಿಸಬೇಕು ಎಂದು ಐ.ಐ.ಹೆಚ್.ಎಮ್.ಆರ್ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಮೈತ್ರಿ ಅವರು ಸಲಹೆ ನೀಡಿದರು.
ಜಿಲ್ಲಾ ಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಯುನಿಸೆಫ್ ಹಾಗೂ ಐ.ಐ.ಹೆಚ್.ಎಮ್.ಆರ್.ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಮತ್ತು ಶಿಕ್ಷಕರಿಗೆ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಅನುಸರಿಸ ಬೇಕಾದ ಸೂಕ್ತ ನಡಾವಳಿಗಳ ಕುರಿತು ಆನ್ಲೈನ್ ಮೂಲಕ ಸಭೆ ಆಯೋಜಿಸಲಾಗಿತ್ತು.
ನಂತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ಮಲಗುವ ಕೋಣೆಗಳಲ್ಲಿ ಹಾಸಿಗೆಗಳ ಅಂತರ ಕಾಯ್ದುಕೊಳ್ಳಿ ಜೊತೆಗೆ ಮಕ್ಕಳು ಟಿ.ವಿ ನೋಡುವ ಸಂದರ್ಭಗಳಲ್ಲಿ ಗುಂಪಾಗಿ ಕೂರದಂತೆ ಅಂತರವನ್ನು ಕಾಪಾಡಿಕೊಳ್ಳಬೇಕು, ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸಲು ಸೋಪು ಮತ್ತು ಸ್ಯಾನಿಟೈಸರ್, ಆಯ್ದ ಪ್ರದೇಶಗಳಲ್ಲಿ ಇಡಬೇಕು, ಮಕ್ಕಳು ತಮ್ಮ ಊರುಗಳಿಂದ ಬಂದಾಗ ೨ ದಿನ ಪ್ರತ್ಯೇಕತೆ ಮಾಡಬೇಕು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿದ್ದಲ್ಲಿ ಸ್ವಯಂ ನಿರ್ಧಾರ ಮಾಡಿ ತರಗತಿಗಳಿಂದ ಹೊರಗುಳಿಯುವಂತೆ ತಿಳಿಸಿದರು. ವಾರಕೊಮ್ಮೆ ಅಡಿಗೆ ಮನೆ, ಶೌಚಾಲಯ, ತರಗತಿಗಳು, ಊಟದ ಸ್ಥಳ ಇತ್ಯಾದಿಗಳ ಸ್ವಚ್ಛತೆ ಬಗ್ಗೆ ಮೇಲ್ವಿಚಾರಣೆ ಮಾಡುವುದು ಅಡುಗೆ ಸಿಬ್ಬಂದಿ ಅಡುಗೆ ತಯಾರಿಸುವ ವೇಳೆ, ಊಟ ಬಡಿಸುವ ವೇಳೆ ರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಮತ್ತು ಸಿಬ್ಬಂದಿಗಳಲ್ಲಿ ನೈರ್ಮಲ್ಯ, ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿರಬೇಕು. ನಿಲಯಗಳಲ್ಲಿ ಮಾಸ್ಕ್ ಸ್ಯಾನಿಟೈಸರ್, ಸೋಪು, ಥರ್ಮೋ ಮೀಟರ್, ಪಲ್ಸ್ ಆಕ್ಸಿಮೀಟರ್, ಲಭ್ಯವಿರುವಂತೆ ನೋಡುಕೊಳ್ಳಬೇಕು ಇದರಿಂದ ಮಕ್ಕಳ ಆರೋಗ್ಯದ ವ್ಯತ್ಯಯವನ್ನು ಪರೀಕ್ಷಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡುತ್ತಾ, ಕೋವಿಡ್ – ೧೯ ರ ೩ನೇ ಅಲೆ ಜೊತೆಗೆ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುತ್ತಿದ್ದು ಬೇಗನೆ ಕಡಿಮೆಯಾಗುವ ಸೂಚನೆ ಕಂಡು ಬರುತ್ತಿಲ್ಲ ಜೊತೆಗೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದರು ಸಹ ನಮ್ಮ ದೇಶದ ಬೃಹತ್ ಜನ ಸಂಖ್ಯೆಗೆ ಲಸಿಕೆ ನೀಡಲು ಇನ್ನು ಸಮಯ ಬೇಕಾಗುತ್ತದೆ. ಆದ್ದರಿಂದ ಈ ಸೋಂಕನ್ನು ನಿಯಂತ್ರಿಸಲು ಕೋವಿಡ್ ಮುಂಜಾಗೃತ ನಡವಳಿಕೆಗಳಾದ ಸೂಕ್ತ ರೀತಿಯಲ್ಲಿ ಮಾಸ್ಕ ಧರಿಸುವುದು, ಕೈಗಳ ಸ್ವಚ್ಛತೆ, ಸಮಾಜಿಕ ಅಂತರ ಕಾಯ್ದುಕೊಳ್ಳುವುದು ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಕೆಮ್ಮು ಶೀತ, ಜ್ವರ ಇತರೆ ಲಕ್ಷಣಗಳಿದ್ದಲ್ಲಿ, ಕೋವಿಡ್ ಉಸಿರಾಟದ ತೊಂದರೆ ಇದ್ದರೇ, ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದಲ್ಲಿ, ಅನಾರೋಗ್ಯ ಪೀಡಿತ ಮಕ್ಕಳಿದ್ದಲ್ಲಿ, ಪೋಷಕರು ಮಕ್ಕಳನ್ನು ಭೇಟಿ ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು. ಜೊತೆಗೆ ಎಲ್ಲಾ ಸಿಬ್ಬಂದಿ ಮತ್ತು ೧೫ ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಜಿಲ್ಲಾ ಅಧಿಕಾರಿ ಶಿವಪ್ರಿಯ, ಅಲ್ಫಾ ಸಂಖ್ಯಾತರ ಕಲ್ಯಾಣ ಇಲಾಖಾ ಜಿಲ್ಲಾಅಧಿಕಾರಿ ಬಿಂದುಮಣಿ, ಜಿಲ್ಲಾ Sಃಅಅ ಸಂಯೋಜಕ ರಾದ ಶ್ರೀ ಸುರೇಶ್ ಬಾಬು, ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು, ಶಿಕ್ಷಕರು ಭಾಗವಹಿಸಿದ್ದರು