-ಪಾಲಾರ್ ಪತ್ರಿಕೆ –
ದೇವನಹಳ್ಳಿ: ಕಾಂಗ್ರೇಸ್ ಸರ್ಕಾರ ಇದ್ದಾಗ ಟಿಪುö್ಪಜಯಂತಿ ಆಚರಣೆ ಮಾಡಲು ನಿರ್ಧಾರ ತೆಗೆದುಕೊಂಡಿತ್ತು ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದನAತರ ಟಿಪುö್ಪಜಯಂತಿ ರದ್ದುಮಾಡಿದೆ. ಸರಕಾರ ರದ್ದುಮಾಡಿದರು ಸಹ ರಾಜ್ಯಾದ್ಯಂತ ಎಲ್ಲೆಡೆ ಟಿಪುö್ಪಜಯಂತಿಯನ್ನು ಆಚರಿಸುತ್ತಿದ್ದಾರೆ ಟಿಪುö್ಪಸುಲ್ತಾನ ಸರ್ವ ಜನಾಂಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದಾರೆ ಎಂದು ರಾಜ್ಯಸಭಾಸದಸ್ಯ ಸಯ್ಯದ್ ನಾಸೀರ್ ಹುಸೇನ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಟಿಪುö್ಪ ಜಯಂತಿ ಅಂಗವಾಗಿ ಅವರ ಜನ್ಮಸ್ಥಳಕ್ಕೆ ಭೇಟಿನೀಡಿ
ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಯಾವುದೇ ಒಂದು ಪುಸ್ತಕವನ್ನು ಓದಿ ಟಿಪುö್ಪಜಯಂತಿ ಆಚರಣೆ ವಿರೋದ ಮಾಡುವುದು ಎಷ್ಟರಮಟ್ಟಿಗೆ ಸರಿ ಟಿಪುö್ಪ ಎಲ್ಲಾ ವರ್ಗದವರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇತಿಹಾಸದಲ್ಲಿ ಮೀಸಲಾತಿಗಾಗಿ ಪ್ರಥಮವಾಗಿ ಚಕಾರ ಎತ್ತಿದವರು ಟಿಪುö್ಪಸುಲ್ತಾನ್, ಶ್ರೀರಂಗಪಟ್ಟಣದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪುರಾತತ್ವ ಇಲಾಖೆಯಿಂದ ಕಾಮಗಾರಿ ಪ್ರಾರಂಭವಾಗಿದೆ ಹಾಗು ದೇವನಹಳ್ಳಿ ಟಿಪುö್ಪಜನ್ಮಸ್ಥಳವನ್ನು ಅಭಿವೃದ್ದಿಪಡಿಸುವ ಕೆಲಸಗಳನ್ನು ಮುಂದಿನದಿನಗಳಲ್ಲಿ ಮಾಡಲಾಗುವುದು. ಬಿಜೆಪಿ ಸರಕಾರದಿಂದ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ. ಮುಂದಿನದಿಗಳಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದನAತರ ಹಂತಹAತವಾಗಿ ಅಭಿವೃದ್ದಿ ಪಡಿಸಲಾಗುವುದು.
ಟಿಪುö್ಪಮತಾಂದ ಕನ್ನಡವಿರೋದಿ ಎಂದು ಬಿಜೆಪಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿ ಮಾತನಾಡಿ ಬಿಜೆಪಿಯವರು ಟಿಪುö್ಪಸುಲ್ತಾನ ಅನ್ಯಭಾಷಿಗರ ವಿರೋದಿ ಎಂದು ಪ್ರತಿಬಿಂಬಿಸುತ್ತಿದ್ದಾರೆ. ಇತಿಹಾಸ ಓದಬೇಕು ಆಗ ಅವರಿಗೆ ಅರ್ಥವಾಗುತ್ತದೆ ಅವರ ಆಳ್ವಿಕೆಯಲ್ಲಿ ಮಠ ಮಂದಿರಗಳಿಗೆ ನೀಡಿರುವ ಕೊಡುಗೆಯನ್ನು ತಿಳಿಯಬೇಕು. ಹಾಗು ಟಿಪುö್ಪಸುಲ್ತಾನ್ ಯಾವ ಭಾಷೆಗೆ ಪ್ರಾಶಸ್ತ÷್ಯ ನೀಡುತ್ತಿದ್ದರು ಎನ್ನುವುದನ್ನು ಇತಿಹಾಸದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ಅದನ್ನು ಓದಿ ತಿಳಿದಿಕೊಳ್ಳಲಿ. ಇತಿಹಾಸವನ್ನು ಯಾರುಬದಲಿಸಲಿಕ್ಕೆ ಬರೆಯುವುದಕ್ಕಾಗಲಿ ಸಾದ್ಯವಿಲ್ಲ. ಕಾಂಗ್ರೇಸ್ ಸರಕಾರ ಟಿಪುö್ಪಜಯಂತಿ ಆಚರಣೆ ನಿರ್ಣಯ ತೆಗೆದುಕೊಂಡಮೇಲೆ ಅವರ ವಿರುದ್ದ ಮಾತನಾಡುತ್ತಿದ್ದಾರೆ. ಟಿಪುö್ಪಸುಲ್ತಾನ ಕನ್ನಡ ಹಾಗು ಹಿಂದು ಸಮಾಜದ ವಿರೋಧಿಯಾಗಿದ್ದರೆ. ಜಗದೀಶ್ಶೆಟ್ಟರ್, ಸದಾನಂದಗೌಡ ಹಾಗು ಯಡಿಯೂರಪ್ಪನವರು ಯಾಕೆ ಟಿಪುö್ಪಜಯಂತಿಯನ್ನು ಆಚರಿಸಿದರು. ಆಗ ಅವರಿಗೆಗೊತ್ತಿರಲಿಲ್ಲವೆ ಟಿಪುö್ಪ ಕನ್ನಡವಿರೋದಿ ಎಂದು ಬರೀ ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಟ್ಟು ಸತ್ಯಾಂಶವನ್ನು ಇತಿಹಾಸದಿಂದ ತಿಳಿದುಕೊಳ್ಳಬೇಕು ಎಂದರು.
ಇದೆ ವೇಳೆ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಅಸೀಫ್ ಸೇಟ್, ಕನ್ನಡ ನಾಜೀರ್ ಸೇರಿದಂತೆ ದೇವನಹಳ್ಳಿ ತಾಲ್ಲೂಕಿನ ವಿವಿದ ಪರ ಸಂಘಟನೆಗಳ ಮುಖಂಡರು ಮುಂತಾದವರು ಇದ್ದರು.