ಪಾಲಾರ್ ಪತ್ರಿಕೆ | Palar Patrike
ಶಿಡ್ಲಘಟ್ಟ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ, ನನ್ನಬದುಕಿನ ಉದ್ದಕ್ಕೂ ನಿಮ್ಮ ಸೇವೆ ನಾನು ಬದ್ಧ ಎಂದು ಎಬಿಡಿ ಟ್ರಸ್ಟ್ನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಕ್ಷೇತ್ರದ ಮತದಾರರಲ್ಲಿ ಮನವಿಮಾಡಿದರು.
2023ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲುತಯಾರಿ ನಡೆಸಿರುವ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ತಾಲೂಕಿನ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಈಕ್ಷೇತ್ರದಿಂದ ಸ್ಪರ್ಧಿಸಲಿದ್ದು ಪಕ್ಷದ ಹೈಕಮಾಂಡ್ಸೂಚನೆಯಂತೆ ನಾನು ಕೆಪಿಸಿಸಿಗೆ ಅರ್ಜಿಸಲ್ಲಿಸುತ್ತಿದ್ದೇನೆ ಎಂದರು.
ಈ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರಆಶೀರ್ವಾದ ಹಾಗೂ ನಿಮ್ಮೆಲ್ಲರ ಆಶೀರ್ವಾದ ನನ್ನಮೇಲಿರಲಿ ನಾನು ನನ್ನ ಬದುಕಿನ ಉದ್ದಕ್ಕೂ ನಿಮ್ಮಸೇವೆಗೆ ಬದ್ದ ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿನ ಹತ್ತು ಹಲವು ಸಮಸ್ಯೆಗಳನ್ನು ನಾನುಗಮನಿಸಿದ್ದೇನೆ, ಮುಖ್ಯವಾಗಿ ಯುವಕರು,ಮಹಿಳೆಯರ ನಿರುದ್ಯೋಗ ಸಮಸ್ಯೆ ತೀವ್ರವಾಗಿಕಾಡುತ್ತಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರ ಕೂಲಿಕಾರ್ಮಿಕರು ಅನೇಕ ರೀತಿಯ ರೋಗಗಳಿಂದಬಳಲುತ್ತಿರುವುದು ಮುಖ್ಯವಾದ ಸಮಸ್ಯೆಗಳಾಗಿವೆ.ಇದೆಲ್ಲಕ್ಕೂ ಶಾಶ್ವತ ಪರಿಹಾರ ಒದಗಿಸುವ ಕೆಲಸಆಗಬೇಕಿದೆ ಎಂದರು.
ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇವಾಲಯ, ಶಿಡ್ಲಘಟ್ಟ ನಗರದದ್ವಿಮುಖ ಗಣಪತಿ, ಶ್ರೀಯಲ್ಲಮದೇವಿ, ಕೋಟೆಆಂಜನೇಯಸ್ವಾಮಿ ದಿಬ್ಬೂರಹಳ್ಳಿ ರಸ್ತೆ ಮತ್ತು ಸಂತೆ ಬೀದಿಯಲ್ಲಿನ ಧರ್ಗಾಗಳಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿದರು.
ಸಹನಾರಾಜೀವ್ಗೌಡ,ಹಾಗೂ ಕೆಪಿಸಿಸಿಸದಸ್ಯ.ನಾರಾಯಣಸ್ವಾಮಿ,ನಗರಸಭೆ ಸದಸ್ಯ ಮಂಜುನಾಥ್ನಾಯಕ್, ಶಮೀವುಲ್ಲಾ, ಬಾಲಕೃಷ್ಣ,ಗಫೂರ್, ತನ್ನು, ಹೀರೆಬಲ್ಲ ಕೃಷ್ಣಪ್ಪ, ಕಂಬದಹಳ್ಳಿಶ್ರೀನಿವಾಸ್ ಸೇರಿದಂತೆ ಅನೇಕ ಕಾಂಗ್ರೆಸ್ಮುಖಂಡರು ಹಾಜರಿದ್ದರು