ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮದ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಭಿರ ದ ಉದ್ಘಾಟನೆ ಶಿಭಿರದ ವ್ಯವಸ್ಥಾಪಕ ದೇವರಾಜ್ ನೆರವೇರಿಸಿದರು,
ಸಮಾಜ ದ ಮತ್ತು ಗೃಹ ಕಲಹಗಳಿಗೆ ಮೂಲ ಕಾರಣ ಕುಡಿತ ಒಮ್ಮೆ ಕುಡಿತದ ಚಟಕ್ಕೆ ಬಲಿಯಾದ ರೆ ತಮ್ಮ ಸಂಸಾರದಲ್ಲಿ ಅನೇಕ ಸಮಸ್ಯೆಗಳೇ ಅಲ್ಲದೇ ಸಮಾಜದ ಸ್ವಾಸ್ಥ್ಯ ಕ್ಕೂ ದಕ್ಕೆ ಬರಲಿದೆ ಎಂದು ಶ್ರೀ ಕ್ಷೆತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ಯೋಜನಾ ಅಧಿಕಾರಿ ಗಣೇಶ್ ಆಚಾರ್ಯ ತಿಳಿಸಿದರು,
ಮಳ್ಳೂರು ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಏರ್ಪಡಿಸಿ ದ್ದ ಮದ್ಯವರ್ಜನ ಶಿಭಿರ ದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಕುಡುತ ಸಾಮಾಜಿಕ ಪಿಡಿಗು ಇದರಿಂದ ಮುಕ್ತಿ ಪಡೆಯದ ಹೊರತು ಮಾನಸಿಕ ಸ್ಥಿರತೆ ಸಿಗುವುದಿಲ್ಲ, ಕುಡಿತದ ಚಟಕ್ಕೆ ಬಲಿಯಾದವರ ಮನಃ ಪರಿವರ್ತನೆ ಮಾಡಲು ಶ್ರೀ ಧರ್ಮಸ್ಥಳ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ದ ಕಾರ್ಯಕ್ರಮದ ಅಂಗವಾಗಿ 8 ದಿನಗಳ ಶಿಭಿರವನ್ನು ಏರ್ಪಡಿಸಿ ಹಿರಿಯರು ತಜ್ಞರು ಶಿಭಿರದಲ್ಲಿ ಪಾಲ್ಗೊಂಡು ಕುಡಿತದ ಚಟಕ್ಕೆ ಬಲಿಯಾಗುವ ದರಿಂದ ಆಗವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಸರಿದಾರಿಗೆ ತರುವ ಮಹತ್ತರವಾದ ಕಾರ್ಯ ನಿರ್ವಹಿಸುತ್ತವೆ ಎಂದರು,ಈಗಾಗಲೇ ಹಲವಾರು ಶಿಭಿರಗಳಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದವರು ಗೌರವ ಯುತ ಜೀವನ ನಡೆಸಿ ಜೀವನದ ಶೈಲಿಯಲ್ಲಿ ಮಹತ್ತರ ಬದಲಾವಣೆ ಗೆ ಸಾಕ್ಷಿ ಯಾಗಿದ್ದಾರೆ ಎಂದರು.
ಅಧ್ಯಕ್ಷ ತೆ ವಹಿಸಿ ಶಿಭಿರದ ವ್ಯವಸ್ಥಾಪಕ ಕಂಪನಿ ದೇವರಾಜ್ ಮಾತನಾಡಿದರು,
ಕಾರ್ಯಕ್ರಮದಲ್ಲಿ ಯೋಜನಾ ಅಧಿಕಾರಿ ಪ್ರಕಾಶ್ ಕುಮಾರ್, ಅನಿತ, ನಂದಕುಮಾರ್, ಪ್ರಶಾಂತ್, ಬೆಳ್ಳೂಟಿ ಸಂತೋಷ್, ತ್ಯಾಗರಾಜ್, ಹಿತ್ತಲಹಳ್ಳಿ ಸುರೇಶ್, ಜಿಲ್ಲಾ ಜನಜಾಗೃತಿ ವೇದಿಕೆಯ ವೆಂಕಟಸ್ವಾಮಿ ರೆಡ್ಡಿ, ಮುಂತಾದ ವರು ಉಪಸ್ಥಿತರಿದ್ದರು.