ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ:– ನಗರದ ಅಶ್ವಿನಿ ಬಡಾವಣೆಯ ಡೆಕ್ಕನ್ ಆಸ್ಪತ್ರೆ ಬಳಿಯ ಕೆ.ಎಂ.ಕೆ ಟ್ರಸ್ಟ್ ಕಛೇರಿಯಲ್ಲಿ ಕೆ.ಎಂ.ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಪಕ್ಷದ ಮುಖಂಡ ದೇವನಹಳ್ಳಿ ಗೋಪಿರವರಿಂದ ಅಂಗವಿಕಲರಿಗೆ ಉಚಿತವಾಗಿ ವಾರ್ಷಿಕ ಬಸ್ಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ದೇವನಹಳ್ಳಿ ಗೋಪಿ, ಇವರ ಪತ್ನಿ ರೇಖಾ, ವಾಣಿಕೃಷ್ಣಾರೆಡ್ಡಿ, ಕೋನಪಲ್ಲಿ ಕೆವಿ ಸತ್ಯನಾರಾಯಣರೆಡ್ಡಿ ಮತ್ತಿತರರು ಪಾಲ್ಗೊಂಡು 135ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಉಚಿತವಾಗಿ ಮಾಸಿಕ್ ಬಸ್ ಪಾಸ್ ಗಳನ್ನು ವಿತರಣೆ ಮಾಡಿ ಶುಭ ಹಾರೈಸಿದರು.
ಈ ವೇಳೆ ದೇವನಹಳ್ಳಿ ಗೋಪಿ ಪತ್ನಿ ರೇಖಾಗೋಪಿರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ನನ್ನ ಪತಿ ಗೋಪಿರವರು ದಿವಂಗತ ಕೆ.ಎಂ ಕೃಷ್ಣಾರೆಡ್ಡಿರವರ ಬಲಗೈ ಬಂಟನಾಗಿ ಕೆ.ಎಂ ಕೃಷ್ಣಾರೆಡ್ಡಿರವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ಕಳೆದ ಮೂರು ವರ್ಷಗಳಿಂದ ತಾಲೂಕಿನಾದ್ಯಂತಹ ಹಲವಾರು ರೀತಿಯ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು, 2023 ರ ವಿಧಾನಸಭೆ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಿದ್ದು, ಚುನಾವಣೆಯಲ್ಲಿ ತಮ್ಮೆಲ್ಲರ ಆಶೀರ್ವಾದ ನನ್ನ ಪತಿಯ ಮೇಲಿರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಂಕಣ್ಣ, ಪಾಲೇಪಲ್ಲಿ ಶಿವಾರೆಡ್ಡಿ, ದೊಡ್ಡಗಂಜೂರುನಾಗರಾಜ್, ವಂಶಿ, ನಾರಾಯಣರೆಡ್ಡಿ, ಮಂಜುನಾಥರೆಡ್ಡಿ, ಎಂ,ಆರ್.ಡಬ್ಲೂ÷್ಯ ಮಂಜುನಾಥ್ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.