ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ : ಪ್ರತಿಯೂಬ್ಬ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಆ ಮಗು ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾನೆ ಎಂದು ಮಾಜಿ ಸಂಸದ ಆರ್ ದ್ರುವನಾರಯಣ ಹೇಳಿದರು
ಅವರು ಆಲೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಹಿರಿಯ ಮತ್ತು ಪ್ರಾಥಮಿಕ ಪ್ರೌಢಶಾಲೆ ನೂತನ ಶಾಲಾ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದರು.
ಮುಂದುವರಿದ ಅವರು ತಾವು ಶಾಸಕ ಹಾಗೂ ಸಂಸದರಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚ£ ಅಧ್ಯತೆ ನೀಡಿದೆ ಆಗ ಆಲೂರು ಸೇರಿದಂತೆ ಹಲವು ಕಡೆ ಪಧವಿ ಪೂರ್ವ ಕಾಲೇಜು ತೆರೆಯಲು ಶ್ರಮಿಸಿದ್ದೇನೆ .ಅಲ್ಲದೆ ಕೇಂದ್ರಿಯ ವಿಧ್ಯಾಲಯ ಸೇರಿದಂತೆ ಆನೇಕ ವಿದ್ಯಾಸಂಸ್ಥೆಗಳನ್ನು ಜಿಲ್ಲೆಯಲ್ಲಿ ತೆರೆಯಲು ಶ್ರಮಿಸಿದ್ದೆನೆ ಎಂದು ತಿಳಿಸಿದರು ವಿದ್ಯೆ ಎಂಬುದು ಯಾರ ಮನೆಯ ಸ್ವತಲ್ಲ ಪ್ರತಿÀಭೆ ಇದ್ದರೆ ಯಾರು ಏನುಬೇಕಾದರು ಸಾಧಿಸಬಹುದು ಗ್ರಾಮೀಣ ಭಾಗದಿಂದ ವಿದ್ಯೆಕಲಿತು ರಾಜ್ಯ ಪ್ರಶಸ್ತಿ ಪಡೆದ ಆಲೂರು ಎ.ಎಸ್ ಅಭಿಷೇಕ್ ಚಿನ್ನದ ಪದಕ ವಿಜೇತ ನಾಗವಳ್ಳಿ ಮಹದೇವಸ್ವಾಮಿ ರವರ ಸಾಧನೆಯನ್ನು ಶ್ಲಾಘಿಸಿದರು.
ಮುಖ್ಯಥಿಗಳಾಗಿ ಭಾಗವಹಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥಪ್ರಸನ್ನ ಮಾತನಾಡಿ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅನುದಾನ ನೀಡಿತ್ತದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದೆ ಬರಬೇಕೆಂದರು
ಸAಸ್ಥೆಯ ಸಂಸ್ಥಾಪಕ ವೀರಭದ್ರಯ್ಯ ನವರ ಭಾವಚಿತ್ರವನ್ನು ಇಎನ್ಟಿ ವೈಧ್ಯ ಬಾಬುರವರು ಅನಾವರಣಗೂಳಿಸಿಪುಷ್ಪಾರ್ಚನೆ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್.ಬಿ.ಸಿ. ಕಮಿಟಿ ಅಧ್ಯಕ್ಷರಾದ ಸುರೇಶ್ ವಹಿಸಿದರು. ಪ್ರಸ್ತಾವಿಕ ಮಾತನಾಡಿದ ಸಂಸ್ಥೆಯ ಮುಖ್ಯಶಿಕ್ಷಕ ಶಂಕರಪ್ಪ ಕಳೆz 20 ವರ್ಷಗಳಿಂದಲೂ ಗ್ರಾಮದಲ್ಲಿ ವಿದ್ಯ ಸಂಸ್ಥೆ ಕಾರ್ಯ ನಿರ್ವಹಿಸುತಿದ್ದು ಪ್ರೌಢಶಾಲೆ ಆರಂಭಗೊAಡ ನಂತರ ನಡೆದ ಎಲ್ಲಾ ಎಸ್.ಎಸ್.ಎಲ್.ಸಿ ಶೇ 100ರಷ್ಟು ಫಲಿತಾಂಶ ಪಡೆಯುತ್ತದೆ ಎಂದು ತಿಳಸಿದರು
ವಿದ್ಯೆ ಸಂಸ್ಥೆಗೆ ಧಾನ ನೀಡಿದ ಧಾನಿಗಳನ್ನು ರಾಜ್ಯ ಪ್ರಶಸ್ತಿ ಪಡೆದ ಎ.ಎಸ್.ಅಭಿಷೇಕರವರನ್ನು ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕೆ.ಬಿ. ಚಿನ್ನಸ್ವಾಮಿ ಉಪಾಧ್ಯಕ್ಷರಾದ ಶಂಕರನಾಯಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ಪ್ರದೀಪ್ ಶಾಲಾಭಿವೃಧಿ ಸಮಿತಿ ಅಧ್ಯಕ್ಷ ನಾಗರಾಜು ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ ವಿಘ್ನೇಶ್ವರ ವಿದ್ಯ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ನಾಗಬಸವಯ್ಯ ವಕೀಲರಾದ ನಾಗಣ್ಣ ನಾಗೇಶ್ ಮುಖ್ಯ ಶಿಕ್ಷಕ ಶಂಕರಪ್ಪ ಸೇರಿದಂತೆ ಶಾಲಾಭಿವೃದಿ ಸಮಿತಿಯ ಸದ್ಯಸರು ಶಾಲಾ ಶಿಕ್ಷಕರು ಸುತ್ತಮುತ್ತಲಿನ ಗ್ರಾಮಸ್ಥರು ಶಾಲೆಯ ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಜರಿದರು
ನಂತರ ಶಾಲಾವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.