Sunday, April 28, 2024
spot_img
HomeChikballapur7ನೇ ವೇತನ ಆಯೋಗ ರಚನೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ...

7ನೇ ವೇತನ ಆಯೋಗ ರಚನೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್ ಅವರಿಂದ ಅಭಿನಂದನೆ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿ ನೀಡಿದ್ದು, ಬಹಳದಿನಗಳ ನಿರೀಕ್ಷೆಯಾಗಿದ್ದ 7ನೇ ವೇತನ ಆಯೋಗವನ್ನು  ಕಳೆದ ಶನಿವಾರ ಅಧಿಕೃತವಾಗಿ ರಚನೆ ಮಾಡಿದ್ದಕ್ಕೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ  ಜಿ. ಹರೀಶ್  ಅವರು   ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರ ಸೌಲಭ್ಯಗಳ ವಿಸ್ತರಣೆಗೆಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ ರಾವ್‌ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಸುವ  ಮೂಲಕ ಮುಖ್ಯಮಂತ್ರಿಗಳು ಸಿಹಿ ಸುದ್ದಿ ನೀಡಿದ್ದಾರೆ.
ಇದರಿಂದ ರಾಜ್ಯದ ಸರಕಾರಿ ನೌಕರರಲ್ಲಿ ಸಂತೋಷಉಂಟುಮಾಡಿದೆ. ಇದಕ್ಕೆಲ್ಲಾ ಕಾರಣೀಭೂತರಾದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ.ರಾಜ್ಯ  ಸಂಘದ  ಎಲ್ಲ  ಪದಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇವೆ ಎಂದು  ಚಿಕ್ಕಬಳ್ಳಾಪುರ  ಜಿಲ್ಲಾ  ಸರ್ಕಾರಿ  ನೌಕರರ  ಸಂಘದ  ಜಿಲ್ಲಾ  ಅಧ್ಯಕ್ಷ  ಜಿ.ಹರೀಶ್ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments