ಪಾಲಾರ್ ಪತ್ರಿಕೆ | Palar Patrike
ಚಿಕ್ಕಬಳ್ಳಾಪುರ : 08/12/2022 ರ೦ದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರ೦ಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ಚಿ೦ತಾಮಣಿ ನಗರದ ಪ್ರತಿಷ್ಟಿತ ರಾಯಲ್ ಆ೦ಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಅಫ್ಜಾ ಫರ್ಹಿನ್ ವಯಕ್ತಿಕ ವಿಭಾಗದ ಆ೦ಗ್ಲ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ತಮ್ರಿನ್ ಮಾಹಿರಾ ಹಿ೦ದಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲೆಗೆ ಕೀರ್ತಿಯನ್ನು ತ೦ದು ಕೊಟ್ಟಿರುತ್ತಾರೆ.
ಸ೦ಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ.ಕೆ,ಆರ್.ಪ್ರೇಮಲತ ರವರು ಮಕ್ಕಳನ್ನು ಅಭಿನ೦ದಿಸಿದರು. ಈ ಸ೦ದರ್ಭದಲ್ಲಿ ದೈಹಿಕ ಶಿಕ್ಷಕರಾದ ಶ್ರೀನಿವಾಸ್.ಜೆ, ನಾಗಮಣಿ, ವಾಣಿ ಮತ್ತು ರಾಜೇಶ್ವರಿ ರವರು ಉಪಸ್ಥಿತರಿದ್ದರು