ಪಾಲಾರ್ ಪತ್ರಿಕೆ | Palar patrike
ಚಾಮರಾಜನಗರ: ವಿಧಿಧ ಸ್ಪರ್ಧೆಯಲ್ಲಿ ವಿಜೇತರಾದ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ. ಅತಿ ಶೀಘ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕಕ್ರೀಡಾ ಸೇವೆಯ ಸಂಸ್ಥೆ ವತಿಯಿಂದ ವಿತರಣೆ ಮಾಡಲಾಗುವುದು ಎಂದು. ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ. ಸಂಸ್ಥೆ ಅಧ್ಯಕ್ಷ ಜಿ ಬಂಗಾರು ತಿಳಿಸಿದರುನಗರದ ಸೋಮವಾರಪೇಟೆ ಗ್ರಾಮದಲ್ಲಿ. ಎಂಸಿಎಸ್ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ. ಸಂವಿಧಾನ ದಿನಾಚರಣೆ. ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದವರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು. ಸಂವಿಧಾನ ರಚನೆ ಮಾಡಿದೆ ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ಈ ಮೂರು ಕಾರ್ಯಕ್ರಮದ ಪ್ರಯುಕ್ತ 50 ಐವತ್ತು ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಛತ್ರಿ. ಪ್ರಶಸ್ತಿ ಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರುಸಂತೆಮರಳ್ಳಿ ಕನ್ನಡ ಭಾಷೆ ಪಂಡಿತ ಜಯಶಂಕರ್. ಧ್ವಜಾರಣೆ ನೆರವೇರಿಸಿ. ಹಾಗೂ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ. ಹಾಗೂ ಸಂವಿಧಾನ ಪ್ರಮಾಣವಚನ ಸ್ವೀಕರಿಸಿ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಕನ್ನಡ ಭಾಷೆಗೆ ಪ್ರಾಚೀನ ಕಾಲದ ಇತಿಹಾಸವಿದೆ ಕನ್ನಡ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಎಂದು ತಿಳಿಸಿದವರುಬಿಡುವಿನಸಂದರ್ಭದಲ್ಲಿ. ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅವಾಗ ನಿಮ್ಮ ಜ್ಞಾನ ವೃದ್ಧಿ ಯಾಗಲಿದೆ ಎಂದು ಕರೆ ನೀಡಿದರುಮುಖ್ಯ ಭಾಷಣಕರಾಗಿ ಆಗಮಿಸಿದ ಎಂಸಿಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿಕ್ಷಕ ಎಚ್ ಎಮ್ ಮಹದೇವಸ್ವಾಮಿ ಮಾತನಾಡಿ. ಕನ್ನಡ ರಾಜ್ಯೋತ್ಸವವನ್ನು ನವಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷಪೂರ್ತಿ ಆಚರಣೆ ಮಾಡಬೇಕು. ಕನ್ನಡ ಎಂಬ ಮಾತು ಕೇಳಿದರೆ ಮನಸ್ಸು ಆನಂದ ಸಿಗಲಿದೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ಎಷ್ಟೋ ಮಂದಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೇವೆ ಮಾಡುತ್ತಿದ್ದಾರೆ. ಅದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕವಿ ಹಾಗೂ ರಂಗ ನಿರ್ದೇಶಕ. ಕಿರಣ್ ಗಿರ್ಗಿ. ತಮ್ಮ ಮಾತಿನ ಮೂಲಕ ರಸಪ್ರಶ್ನೆಗಳನ್ನು ಕೇಳಿ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಹೊರ ಚೆಲ್ಲಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ. ಎಂಸಿಎಸ್ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ಎಂ ನಾಗರಾಜು ಮಾತನಾಡಿ. ಇಂದು ನಮ್ಮ ಸಂಸ್ಥೆ ವತಿಯಿಂದ. ಮೂರು ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಎಲ್ಲಾ ಶಿಕ್ಷಕರಿಗೂ ವಿದ್ಯಾರ್ಥಿಗಳು ಶುಭಾಶಯಗಳು ಎಂದು ಸಂತೋಷ ವ್ಯಕ್ತಪಡಿಸಿದವರು. ಈಗಲೇ ನಮ್ಮ ಸಂಸ್ಥೆ ವತಿಯಿಂದ. ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇಲ್ಲಿ ವಿದ್ಯಾಭ್ಯಾಸದ ಜೊತೆಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಹಲವಾರು ಕಾರ್ಯಕ್ರಮ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ. ಎಂಸಿಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲ. ಕೆ ಶ್ರೀಧರ್ ಮೂರ್ತಿ. ಶಿಕ್ಷಕರಾದ. ಸಿಎನ್ ಸಂಪತ್ ಕುಮಾರ್. ಏನ್ ಮಾದೇವಸ್ವಾಮಿ. ಕಾರ್ತಿಕ್. ಶಿಕ್ಷಕಿ. ಗೀತಾ. ಮಧುರ. ಉಮಾ. ನಯನ. ಹಾಜರಿದ್ದರುಸುಮಾರು 50 ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯ ವ್ಯಕ್ತಿಗಳಿಂದ ಗಣ್ಯ ವ್ಯಕ್ತಿಗಳು ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.