ಪಾಲಾರ್ ಪಾತ್ರಿಕೆ | Palar Pathrike ಚಾಮರಾಜನಗರ: ಚುನಾವಣಾ ಸಂಬಂದಿತ ನೀತಿನಿಯಮಗಳು ಕಣ್ಣ ಎದುರೆ ಗಾಳಿಗೆ ತೂರಿತ್ತಿದ್ದರೂ ಚುನಾವಣಾ ಆಯೋಗವಾಗಲಿ , ಜಿಲ್ಲಾದಿಕಾರಿಯಾಗಲಿ ಏನೂ ಮಾಡಲಾಗದ ಸ್ಥಿತಿಗತಿಯಲ್ಲಿದೆ ಎಂದರೆ ತಪ್ಪಾಗಲಾರದು. ಮತಗಟ್ಟೆಯ ೧೦೦ ಮಿ.ಅಂತರದಲ್ಲಿ ಯಾವ್ದೆ ಚಿಹ್ನೆ ಪ್ರದರ್ಶಿಸುವ ,ಮತ ಕೇಳುವ ಪ್ರಕ್ರಿಯೆ ನಡೆಬಾರದೆಂಬ ನಿಯಮವಿದ್ದರೂ ಮತಗಟ್ಟೆ ಬಳಿಯೆ ಪ್ರಚೋದನೆ ಮಾಡುತ್ತಿದ್ದು ಕಂಡು ಬಂದವು..ಮಿಗಿಲಾಗಿ ಮತ ಚಲಾವಣೆ ಮಾಡುವ ಸ್ಥಳದೊಳಗೆ ಪೊಟೊಗ್ರಪಿ ವಿಡಿಯೊಗ್ರಪಿ ಕೆಲಸಗಳು ನಡೆದವು. ಮತಗಟ್ಟೆಯೊಳಗೆ ಕೆಲ ಮತದಾರರು ತಮ್ಮದೆ ಅಭ್ಯರ್ಥಿಗಳಿಗೆ ಮತ ಹಾಕಿರುವ ಬಗ್ಗೆ ಖಚಿತತೆ ಪಡಿಸಲು ಪೊಟೊ ತೆಗೆದು ವೈರಲ್ ಕೂಡ ಮಾಡಿದ್ದಾರೆ. ಮತಕೇಂದ್ರದೊಳಗಿರಲಿ ಮತಗಟ್ಟೆ ಸಮೀಪವೇ ಪೊಟೊ ತೆಗೆದರೂ ಅದಿಕಾರಿಗಳು ಮೌನವಾಗಿರುವುದು ಹಾಗೂ ಎಚ್ಚರಿಕೆ ವಹಿಸದಿರುವುದು ಶೋಜಿಗ ಮೂಡಿಸಿದೆ
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ