ಶಿಡ್ಲಘಟ್ಟ: ತಾಲ್ಲೂಕಿನ ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಚುನಾವಣೆ ನಡೆಯಿತುಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಮದ ಕೆ.ಪಿ. ನಾರಾಯಣ ಸ್ವಾಮಿ ಹಾಗೂ ದ್ಯಾವಪ್ಪ ರವರು ಸ್ಪರ್ಧಿಸಿದ್ದು, ನಾರಾಯಣಸ್ವಾಮಿ ರವರಿಗೆ ಹತ್ತು ಮತಗಳು ದ್ಯಾವಪ್ಪ ರವರು ಎಂಟು ಮತಗಳು ಪಡೆದುಕೊಂಡರು .ಕೆ ಪಿ ನಾರಾಯಣಸ್ವಾಮಿ ರವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಪ್ರಮೀಳ ನಾಗೇಶ್ ಹಾಗೂ ಶ್ವೇತಾ ರವರು ಅವಿರೋಧವಾಗಿ ಆಯ್ಕೆ ಯಾಗಿರುತ್ತರೆ.
ಸದಸ್ಯರಾಗಿ ಮಮತಾ, ಕೃಷ್ಣಪ್ಪ, ಹರೀಶ್, ವೆಂಕಟರಾಜು, ನಾರಾಯಣಸ್ವಾಮಿ, ಶ್ರೀನಿವಾಸ್, ರಜನಿ, ಲಕ್ಷ್ಮೀದೇವಮ್ಮ, ಮಮತಾ, ಲಕ್ಷ್ಮಿ , ಕವಿತಾ, ಮಂಜುಳಾ, ದ್ಯಾವಪ್ಪ, ಚಂದ್ರಶೇಖರ್, ಸುರೇಶ್ ಆಯ್ಕೆಯಾಗಿರುತ್ತಾರೆ.
ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಹೂ ಮಾಲೆಯಾಕಿ ಸನ್ಮಾನಿಸಿ ಸಿಹಿ ಹಂಚಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆಪಿ ನಾರಾಯಣಸ್ವಾಮಿ ರವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಾಮಾಜಿಕ ಬದ್ಧತೆಯಿಂದ ನಾನು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗಪಡಿಸಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗಂಗಾ ರತ್ನಮ್ಮ ದೇವರಾಜು, ಉಪಾಧ್ಯಕ್ಷರಾದ ಕೆ. ಪಿ. ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ಆರ್ ಚಂದ್ರಶೇಖರ್, ಸಿ ಆರ್ ಪೀ ಚಂದ್ರಶೇಖರ್, ಮುಖ್ಯ ಶಿಕ್ಷಕರಾದ ವೆಂಕಟ ನರಸಪ್ಪ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ವೆಂಕಟ ರಾಜು, ಗ್ರಾಮದ ಮುಖಂಡರಾದ ಆದಿ ನಾರಾಯಣಪ್ಪ, ಕೆ ಎಸ್ ಮುನಿಯಪ್ಪ ಸೇರಿದಂತೆ ಮುಂತಾದವರಿದ್ದಾರು.