Wednesday, April 24, 2024
spot_img
HomeRamnagarನಿಗಧಿತ ಅವಧಿಯಲ್ಲಿ ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಿ: ಜವರೇಗೌಡ ಟಿ

ನಿಗಧಿತ ಅವಧಿಯಲ್ಲಿ ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಿ: ಜವರೇಗೌಡ ಟಿ

ರಾಮನಗರ: ಸಕಾಲ ಯೋಜನೆಯನ್ನು ಸಾರ್ವಜನಿಕರಿಗೆ ನಿಗಧಿತ ಅವಧಿಯಲ್ಲಿ ಸೇವೆ ನೀಡಲು ಜಾರಿಗೆ ತರಲಾಗಿದೆ. ಸಕಾಲದಲ್ಲಿ ಬರುವಂತಹ  ಅರ್ಜಿಗಳನ್ನು ವಿಳಂಬವಾಗದAತೆ  ನೋಡಿಕೊಂಡು ಸೇವೆ ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ.ಟಿ ಅವರು ತಿಳಿಸಿದರು.
ಅವರು  ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಸಕಲ ಸೇವೆಗಳ  ಪ್ರಗತಿ ಪರಿಶೀಲನಾ ಸಭೆಯಲ್ಲಿ  ಭಾಗವಹಿಸಿ ಮಾತನಾಡಿದರು. ಸಕಾಲದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಬೇಕಿರುವ ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದರು.
ಸಕಾಲ ಯೋಜನೆಯಡಿ  ಸೇವೆ ನೀಡುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು. ವಿವಿಧ  ಇಲಾಖೆಗಳಲ್ಲಿನ  ಸಕಾಲ  ಸೇವೆಗಳಲ್ಲಿ ವಿಳಂಬವಾದ,  ಅವಧಿ  ಮೀರಿ ವಿಲೇವಾರಿ ಆದ ಹಾಗೂ ಅವಧಿಗೂ ಮುನ್ನ ವಿಲೇವಾರಿಯಾದ  ಅರ್ಜಿಗಳ ಬಗ್ಗೆ ಇಲಾಖಾ ಅಧಿಕಾರಿಗಳು ಮೇಲ್ವಿಚರಣೆ ನಡೆಸಿ, ಲೋಪಗಳಿದ್ದಲ್ಲಿ  ಸರಿಪಡಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments