Saturday, April 27, 2024
spot_img
HomeChikballapurಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ

ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ

ಪಾಲಾರ್ ಪತ್ರಿಕೆ | Palar Pathrike

ಶಿಡ್ಲಘಟ್ಟ : ಎರಡು ವರ್ಷದಿಂದ ನಿರಂತರವಾಗಿ ಸಮಾಜ ಸೇವೆಯ ಮೂಲಕ ಮನೆಮಾತಾಗಿರುವ  ಕೆಪಿಸಿಸಿ ಕೋ-ಅರ್ಡಿನೇಟರ್ ರಾಜೀವ್ ಗೌಡ  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಗರ ಮತ್ತು ಹೋಬಳಿ ಮಟ್ಟದ ಗ್ರಾಮಗಳಿಗೆ  ಕೋವಿಡ್ ಸಂದರ್ಭದಲ್ಲಿ ದಿನಸಿ ಕಿಟ್ಟು ವಿತರಿಸಿ ಬಡವರ ಕಷ್ಟದಲ್ಲಿ ಪಾಲಾಗಿದ್ದರು ನಂತರದ ದಿನಗಳಲ್ಲಿ ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಸುಮಾರು 10 ಆಂಬುಲೆನ್ಸ್ ವಾಹನಗಳನ್ನು ತಾಲ್ಲೂಕಿಗೆ ಕೋಡುಗೆಯಾಗಿ ಕೊಟ್ಟರು  ಎಲ್ಲಾ ಹೋಬಳಿ ಮತ್ತು ಪ್ರಮುಖ ಸ್ಥಳಗಳಲ್ಲಿ 24 ಘಂಟೆ ಸೇವೆ ಸಲ್ಲಿಸುತ್ತಿದ್ದಾವೆ. ಇದುವರೆಗೂ ಎಷ್ಟೋ ಜನರಿಗೆ ಇದರ ಪ್ರಯೋಜನ ಸಹ  ಪಡೆದಿರುತ್ತಾರೆ‌ ಹಲವಾರು ಗ್ರಾಮಗಳಿಗೆ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ ಸಹಾಯವನ್ನು ನೀಡಿರುತ್ತಾರೆ. ಅದರ ಭಾಗವಾಗಿ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ನೆಲೆಸಿರುವ  ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದು ನಾಡಿನ ಪ್ರಾಪ್ತಿಗಾಗಿ  ಒಳಿತು ಮಾಡುವಂತೆ ಕೋರಿ ದೇಗುಲದ ಜೀರ್ಣೋದ್ದಾರಕ್ಕೆ(ಪೈಂಟ್ ವ್ಯವಸ್ಥೆಗೆ) ಒಂದು ಲಕ್ಷ ರೂಗಳನ್ನು ಆರ್ಥಿಕ ಸಹಾಯ ನೀಡಿದರು.
ಈ ಸಂಧರ್ಭದಲ್ಲಿ  ಜಿ.ಟಿ.ನಾಗರಾಜ್, ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ ಸದಸ್ಯರುಗಳಾದ  ಚಂದ್ರು, ಶ್ರೀಯುತ ಪ್ರಕಾಶ್, ನಹೀಮ್,ಶ್ರೀಮತಿ ಮಂಜುಳಾನಾರಾಯಣಸ್ವಾಮಿ, ಹಾಗೂ ಮುಖಂಡರಾದ ಶ್ರೀಯುತ ಸಲೀಮ್, ಶಬ್ಬೀರ್,  ನಾರಾಯಣಸ್ವಾಮಿ,  ಚಂದ್ರಣ್ಣ, ಕೃಷ್ಣಪ್ಪ,  ದೇವೇಗೌಡ,ಜಾನಿ, ಮುನಿರಾಜು(ಕುಟ್ಟಿ), ಮುರಳಿ, ಕಂಬದಹಳ್ಳಿ ಸಿನಪ್ಪ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments