ಪಾಲಾರ್ ಪತ್ರಿಕೆ | Palar Pathrike
ಶಿಡ್ಲಘಟ್ಟ : ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಚುನಾವಣಾ ಸಿದ್ಧತೆಗಳನ್ನು ಮಾಡಬೇಕು ಬೂತ್ ಮಟ್ಟದಲ್ಲಿಸಭೆಗಳನ್ನುನಡೆಸಿ ಸಂಘಟನೆಯನ್ನು ಬಲಪಡಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಕರೆ ನೀಡಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿಬಿಜೆಪಿ ಪಕ್ಷದ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ನಗರಮತ್ತು ಗ್ರಾಮಾಂತರ ಮಂಡಲದ ಕಾರ್ಯಕಾರಣಿಸಭೆಯನ್ನು ಉದ್ದೇಶಿಸಿ ಮಾತನಾಡಿ,
ಪಕ್ಷದ ಪದಾಧಿಕಾರಿಗಳು ಪ್ರತಿ ಬೂತ್ ಗಳಲ್ಲಿ ಪಕ್ಷದ ಕಾರ್ಯಕರ್ತರನ್ನ ಒಗ್ಗೂಡಿಸಿ ರಾಜ್ಯದ ಮತ್ತುಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ.ಪ್ರತಿವಾರ್ಡ್ನಲ್ಲಿರುವ ಪಕ್ಷದಕಾರ್ಯಕರ್ತರ ನಿಕಟ ಸಂಪರ್ಕಬೆಳಸಿ ನಾಗರಿಕ ಸೌಲಭ್ಯಗಳ ಬಗ್ಗೆಅವರ ಸಾಧಕ ಬಾದಕಗಳ ಬಗ್ಗೆಪರಿಹಾರವನ್ನುಅರಿತು ಸೂಚಿಸಬೇಕಾಗಿದೆ,
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರುಪಕ್ಷದ ಜಿಲ್ಲಾ ಅಧ್ಯಕ್ಷ ರಾಮಲಿಂಗಾ ರೆಡ್ಡಿ, ಡಾ. ಶ್ಯಾಮ್ಪ್ರಸಾದ್,ಅಟಲ್ ಬಿಹಾರಿವಾಜಪೇಯಿಅಡ್ವಾನಿಯಂತಹ ಮಹಾನ್ ನಾಯಕರ ತ್ಯಾಗಬಲಿದಾನದ ಫಲ ಇ೦ದು ಶೂನ್ಯದಿಂದ ಮೇಲೆದ್ದು ವಿಶ್ವದಾಖಲೆ ಪ್ರಮಾಣದಲ್ಲಿ ಸಂಸತ್ತಿನಲ್ಲಿ ಸದಸ್ಯರನ್ನುಹೊಂದಿರುವ ಪಕ್ಷವನ್ನು ಮತ್ತಷ್ಟುಸದೃಢಗೊಳಿಸುವುದುಅನಿವಾರ್ಯ, ಪಕ್ಷದಲ್ಲಿ ಜವಾಬ್ದಾರಿಹೊತ್ತ ಮುಖಂಡರು ಕಾರ್ಯಕರ್ತರ ನೋವುಗಳನ್ನು ಕಷ್ಟಸುಖಗಳನ್ನು ಅರಿತು ಪಕ್ಷದ ಕಾರ್ಯಕ್ಕೆ ಸಜ್ಜುಗೊಳಿಸುವ ಬಗ್ಗೆ ಇಂದು ಚಿಂತನ ಮಂಥನ ನಡೆಸುವ ಸಲುವಾಗಿ ಪ್ರತಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಪಕ್ಷದ ಕೆಲಸ ಮಾಡಲು ವಿಸ್ತಾರಕರಿಗೆ ಚನೇನ ಹಳ್ಳಿಯಲ್ಲಿತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿ ಉಳ್ಳಕಾರ್ಯಕರ್ತರು ತಮ್ಮ ಹೆಸರನ್ನು ನೊಂದಾಯಿಸಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ರಾಜಣ್ಣನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದೀಶ್ಗ್ರಾಮಾಂತರ ಮಂಡಲ್ ತಾಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರ ಗೌಡ, ಸ್ಕೂಲ್ ದೇವರಾಜ್, ಕನಕಪ್ರಸಾದ್ ಮು೦ತಾದವರು ಮಾತನಾಡಿದರು.ನರ್ಮದ ರೆಡ್ಡಿ, ರಜನಿಕಾಂತ್ ಬಾಬು,ರಮೇಶ್ ಭಾಯಿ, ವೆಂಕಟೇಶ್ ಮಂಜುಳಮ ಗೌಡ,ಮುಂತಾದವರು ಭಾಗವಹಿಸಿದ್ದರು.