ಪಾಲಾರ್ ಪತ್ರಿಕೆ | Palar Patrike
ಚಿಂತಾಮಣಿ : ನಗರದ ಎನ್.ಆರ್.ಬಡಾವಣೆಯಲ್ಲಿರುವ ಶ್ರೀ ಬ್ರಹ್ಮಚೈತನ್ಯ ಶ್ರೀರಾಮಮಂದಿರದಲ್ಲಿ ಶ್ರೀ ಸದ್ಗುರು ದತ್ತಾತ್ರೇಯ ಮಂದಿರದ ಜೀರ್ಣೋದ್ದಾರ ಪೂರ್ಣಗೊಂಡು ಇಂದು ಬೆಳಿಗ್ಗೆ ಮರು ಪ್ರತಿಷ್ಠಾಪನೆ ಸಂಪನ್ನವಾಯಿತು.
ವೇ||ಬ್ರ||ಶ್ರೀ ಕೌಶಿಕ್ ಭೂಪತಿ ಶರ್ಮ ರವರ ಅಧ್ವರ್ಯದಲ್ಲಿ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕಳಾಹೋಮ, ಕುಂಭಾಭಿಷೇಕ, ಅಷ್ಠಾವಧಾನ ಸೇವೆ ಮಹಾಮಂಗಳಾರತಿ ನಂತರ ಶ್ರೀ ಅಕ್ಷರಾನಂದೇAದ್ರ ಸರಸ್ವತಿಸ್ವಾಮಿಗಳಿಂದ ಸದ್ಗುರುಗಳ ಅನುಗ್ರಹ-ಶ್ರೀದತ್ತಾತ್ರೇಯರ ಅವತಾರ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಲಿಕೆ ನೆರೆವೇರಿತು.
ಇಂದಿನಿAದ ೪೨ ದಿನಗಳ ಕಾಲ ಮಂಡಲ ಪೂಜೆ ಪ್ರತಿದಿನ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ನಡೆಯಲಿದ್ದು ಆಸಕ್ತ ಭಕ್ತರು ಮಂದಿರದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದ್ದಾರೆ
ಸಮಾರಂಭದಲ್ಲಿ ಮಂದಿರ ಅಧ್ಯಕ್ಷ ಜಿ.ಹೆಚ್.ವೆಂಕಟೇಶಮೂರ್ತಿ, ಉಪಾಧ್ಯಕ್ಷ ಜಿ.ಹೆಚ್.ರಘುನಾಥ್, ಬಿ.ಸಿ.ಪ್ರಸಾದ್, ಗುರುಪ್ರಕಾಶ್, ರಾಜಾರಾಂ, ಜಿ.ಜಯರಾಂ ನಾಣಿ, ಅಶ್ವಥ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.