ಚಿಂತಾಮಣಿ : ನಗರದ ಕೆನರಾ ಬ್ಯಾಂಕ್ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಭಗತ್ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಟೈ-ಬೆಲ್ಟ್ಗಳನ್ನು ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಹಾಗು ಗಣ್ಯರು ವಿತರಿಸಿದರು.
ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ ಭಗತ್ ಫೌಂಡೇಷನ್ ಸಂಸ್ಥೆಯಿAದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟೈ-ಬೆಲ್ಟ್ಗಳನ್ನು ವಿತರಿಸುತ್ತಿರುವುದು ಹರ್ಷದಾಯಕವಾಗಿದ್ದು ಸರ್ಕಾರದ ಅನುದಾನಗಳ ಜೊತೆಗೆ ದಾನಿಗಳು ಸಹಾಯಹಸ್ತ ಚಾಚುವುದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹದಾಯಕವಾಗಿದೆಯೆಂದರು. ಸಮಾಜ ನಮಗೆ ಏನು ಕೊಡುತ್ತದೆ ಎಂಬುದನ್ನು ಅಪೇಕ್ಷಿಸದೆ ಸಮಾಜಕ್ಕೆ ನಾವು ಏನು ಕೊಡಬೇಕು ಎನ್ನುವ ಮನೋಭಾವವನ್ನು ಎಲ್ಲರೂ ಬೆಳಸಿಕೊಳ್ಳಬೇಕೆಂದರು. ಭಗತ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಲೋಕೇಶ್ ಗೌಡ ಮತ್ತಷ್ಟು ಸಮಾಜಸೇವೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಸದಸ್ಯರಾದ, ಮಂಜುನಾಥ್, ಜಯಮ್ಮ, ಶಾಲೆಯ ಮುಖ್ಯ ಶಿಕ್ಷಕ ಮುನಿಯಪ್ಪ, ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.