ಪಾಲಾರ್ ಪಾತ್ರಿಕೆ | Palar Pathrike ಚಾಮರಾಜನಗರ: ಮತ ಹಾಕೊತನಕವಷ್ಟೆ ಮತದಾರ ಅಭ್ಯರ್ಥಿ ಸಂಬಂದ ಚೆನ್ನಾಗಿ ಇರುತ್ತದೆ ಮತ ಹಾಕಿದ ನಂತರ ನೀವ್ಯಾರೊ ನಾವ್ಯಾರೊ ಅನ್ನೊ ಕಾಲದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಗಾಯಾಳು ಮತದಾರನೊಬ್ಬನಿಗೆ ಟಿಂಚರ್ ಹಾಕಿ ಪ್ರಥಮ ಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಕೊಳ್ಳೇಗಾರ ವಿಧಾನ ಸಭಾ ಕ್ಷೇತ್ರದ ೨೧೨ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಬಂದಿದ್ದ ಮತದಾರನಿಗೆ ಗಾಯವಾಗಿದ್ದು ಸ್ಥಳದಲ್ಲಿ ಇದ್ದ ಆಶಾ ಕಾರ್ಯಕರ್ತೆ ಟಿಂಚರ್ ಹಾಕಿ ಪ್ರಾಥಮಿಕ ಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎನ್ನಲಾಗಿದೆ.ಆಶಾ ಕಾರ್ಯಕರ್ತೆಯ ಕೆಲಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ