ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ : ಉಡುಪಿಯ ಪೇಜಾವರ ಮಠಾಧೀಶರೂ ಅಯೋಧ್ಯೆಯ ಶ್ರೀ ರಾಮಮಂದಿರದ ಟ್ರಸ್ಟಿಗಳೂ ಆದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರನ್ನು ನಗರದ ಜೋಡಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರಸ್ವಾಮಿ ಮಠಕ್ಕೆ ಪೂರ್ಣಕುಂಭ ಹಾಗು ಗೋಪೂಜೆಯೊಂದಿಗೆ ಸ್ವಾಗತ ಕೋರಲಾಯಿತು.
ನಂತರ ಶ್ರೀಗಳು ಅಶ್ವಥನಾರಾಯಣ, ಸಿ.ಎನ್.ನರಸಿಂಹರೆಡ್ಡಿ, ಚಂಗಯ್ಯಶೆಟ್ಟಿ, ಓಲೇಟಿ ಮೆಡಿಕಲ್ಸ್, ಕಲ್ಯಾಣ್, ನಾರಾಯಣಮೂರ್ತಿ, ನಾಮಾ ನಾಗೇಂದ್ರ, ಗಾಯತ್ರಿ ಸ್ವಿಟ್ಸ್ ಅಮರನಾಥ್ ರವರ ನಿವಾಸಗಳಿಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದರು.
ಶ್ರೀ ವಿಷ್ಣು ಭವನ್ ಹೋಟೆಲ್ ಮಾಲೀಕರಾದ ವಾದಿರಾಜ್ ಮನೆಯಲ್ಲಿ ಪೇಜಾವರ ಮಠದ ಪಟ್ಟದ ದೇವರಾದ ಶ್ರೀ ರಾಮವಿಠ್ಠಲ ದೇವರ ಪೂಜೆ ನೆರೆವೇರಿಸಿದರು.
ರಾತ್ರಿ ಶ್ರೀಮಠದಲ್ಲಿ ಪೇಜಾವರ ಮಠದ ಪಟ್ಟದ ದೇವರಾದ ಶ್ರೀ ರಾಮವಿಠ್ಠಲ ದೇವರ ತೊಟ್ಟಿಲ ಪೂಜೆ ನೆರವೇರಿಸಿ ಫಲ ಮಂತ್ರಾಕ್ಷತೆ ನೀಡಿದರು.
ಮಠದ ಟ್ರಸ್ಟಿಗಳಾದ ಪದ್ಮಶೇಷಾದ್ರಿ, ಬಿ.ಆರ್.ಶ್ರೀನಾಥ್, ಎನ್.ಎಂ.ರಾಘವೇAದ್ರ, ಅರ್ಚಕ ಕೃಷ್ಣಮಾಚಾರ್, ವೇ.ಬ್ರ.ಶ್ರೀ ರಮೇಶ್ ಶರ್ಮ, ಧರ್ಮರಾಜ್, ಕೇದಾರ್, ಪ್ರಭಾಕರ್, ರಾಘವೇಂದ್ರ, ವಾದಿರಾಜ್, ರಾಮಚಂದ್ರ, ಎಸ್.ವಿ.ರವಿಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.