ಶಿಡ್ಲಘಟ್ಟ: ತಾಲೂಕು ಸಮತಾ ಸೈನಿಕ ದಳದ SSD ತಾಲೂಕು ಘಟಕ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಅಧ್ಯಕ್ಷತೆಯಲ್ಲಿ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ನೂತನ ಸಮಿತಿಯನ್ನು ರಚನೆ ಮಾಡಲಾಯಿತು .
ಈ ಹಿಂದೆ ಇದ್ದ ಅಧ್ಯಕ್ಷರ ಕಾಲಅವಧಿ ಮೂರು ವರ್ಷಗಳು ಮುಕ್ತಾಯಗೊಂಡ ಹಿನ್ನೆಲೆ ಇಂದು ತಾಲೂಕಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯಿತು.
ತಾಲೂಕಿನ ಅಧ್ಯಕ್ಷರಾಗಿ ಎಂ. ವಿಜಯಕುಮಾರ್. ಗೌರವ ಅಧ್ಯಕ್ಷರಾಗಿ ಮುನಿಆಂಜಿನಪ್ಪ,ಕಾರ್ಯಾಧ್ಯಕ್ಷರಾಗಿ ರಾಮಾಂಜಿನಪ್ಪ,ಪ್ರಧಾನ ಕಾರ್ಯದರ್ಶಿ ಎಚ್ಎಸ್ ವೇಣುಗೋಪಾಲ್ ,ಉಪಾಧ್ಯಕ್ಷರಾಗಿ ಅಮರೇಶ್, ಮಂಜುನಾಥ್, ಮುನಿಕೃಷ್ಣಪ್ಪ, ಡಿಎನ್ ಮುನಿರಾಜ, ನರಸಪ್ಪ,ಸಂಘಟನಾ ಕಾರ್ಯದರ್ಶಿ ಗಂಗಾಧರ್, ಆಂಜಿನಪ್ಪ, ದ್ಯಾವಪ್ಪ, ಮೂರ್ತಿ,ಪರಮೇಶ್ , ಖಜಾಂಜಿ ನಂಜಪ್ಪ , ಪ್ರಧಾನ ಗೌರವಧ್ಯಕ್ಷರಾಗಿ ಈರಪ್ಪ, ತಾಲೂಕು ಕಲಾ ಮಂಡಳಿ ಪದಾಧಿಕಾರಿಗಳ ಅಧ್ಯಕ್ಷರಾಗಿ ಚಂದ್ರು, ಗೌರವ ಅಧ್ಯಕ್ಷರಾಗಿ ವೆಂಕಟರಾಜು, ಕಾರ್ಯಾಧ್ಯಕ್ಷರಾಗಿ ನಾರಾಯಣಸ್ವಾಮಿ, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅರಳಹಳ್ಳಿ ನವೀನ್ , ಕಾರ್ಯಾಧ್ಯಕ್ಷರಾಗಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರವರುಗಳನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆಯಾದರು.ನೂತನ ಪದಾಧಿಕಾರಿಗಳಿಗೆ ಹೂಮಾಲೆ ಹಾಕಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಜಿ ಸಿ ವೆಂಕಟರಮಣಪ್ಪ,ಜಿಲ್ಲಾ ಉಪಾಧ್ಯಕ್ಷ ಈಶ್ವರಪ್ಪ, ನೂತನ ಗೌರವಾಧ್ಯಕ್ಷ ದ್ಯಾವಕೃಷ್ಣಪ್ಪ, ರಮೇಶ್, ಟಿವಿ ಮುನಯ್ಯ ಸೇರಿದಂತೆ ಇತರರು ಹಾಜರಿದ್ದರು.