ಶಿಡ್ಲಘಟ್ಟ: ನಗರದ ನೂತನವಾಗಿ ನಾಲ್ಕು ಜನರು ನಾಮ ನಿರ್ದೇಶಕರಿಗೆ ಆಯ್ಕೆಗೊಂಡು ಅವರನ್ನು ನಗರಸಭೆ ಪೌರಾಯುಕ್ತರು ಶ್ರೀಕಾಂತ್ ಅವರಿಂದ ಇಂದು ಪದಗ್ರಹಣ ಸ್ವೀಕಾರ ಮಾಡಲಾಯಿತು.
ಭಾರತೀಯ ಜನತಾ ಪಕ್ಷದಿಂದ ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಖೇಶ್,ಕಾರ್ಯದರ್ಶಿ ಭಾಸ್ಕರ್,ಉಪಾಧ್ಯಕ್ಷರಾಗಿದ್ದ ಪ್ರಕಾಶ್, ಬಿ ಜಗದೀಶ್ ಅವರು ನಗರಸಭೆಗೆ ಪದಗ್ರಹಣ ಮಾಡಿದರು
ನಾಮ ನಿರ್ದೇಶಕ ಬಿ ಜಗದೀಶ್ ಮಾತನಾಡಿ ಪೌರಾಯುಕ್ತರು ಅಧ್ಯಕ್ಷರು ಹಾಗೂ ಎಲ್ಲಾ ನಗರಸಭಾ ಸದಸ್ಯರು ನಮಗೆ ಸಹಕಾರ ನೀಡಬೇಕು ಮತ್ತು ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಇನ್ನು ಮುಂದೆ ಎಲ್ಲಾ ಕಾರ್ಯಗಳಿಗೂ ಪೂರ್ಣ ಸಹಕಾರ ನೀಡಬೇಕೆಂದರುನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಹಾಜರಿದ್ದು ನೂತನವಾಗಿ ಆಯ್ಕೆಯಾದ ನಾಮ ನಿರ್ದೇಶಕರಿಗೆ ಶುಭಕೋರಿದರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷರು ರಾಘವೇಂದ್ರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿಸಿ ನಂದೀಶ್, ಕೃಷ್ಣಪ್ಪ, ದೇವರಾಜ್, ಮಹಮ್ಮದ್, ಅಮಾನುಲ್ಲಾ, ಖಾದಿರ್ ಪಾಷಾ, ಮೋಹನ್, ಶ್ರೀ ರಾಮ್, ಮಂಜುನಾಥ್, ಮುಂತಾದವರಿದ್ದರು.