ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಮೂಕ ಪ್ರಾಣಿಗಳಿಗೆ ನೀರುಣಿಸುವ ಸಲುವಾಗಿ, ಸಮಾನ ಮನಸ್ಕ ಗೆಳೆಯರು ಗರದ ವಿವಿಧ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ಭಾನುವಾರ ಇಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಬಳ್ಳಾಪುರದ ರೈಲ್ವೆ ನಿಲ್ದಾಣ, ಪಶುವೈದ್ಯಕೀಯ ಆಸ್ಪತ್ರೆ, ಸುಬ್ಬರಾಯನದೇವಸ್ಥಾನ, ಕಂಬದ ಅಂಜನೇಯಸ್ವಾಮಿ ದೇವಸ್ಥಾನ ಮತ್ತು ಬ್ಯಾರೇಜ್ ರಸ್ತೆಯಲ್ಲಿ ಕುಡಿಯುವ ನೀರಿನ ತೊಟ್ಟಿ ಇಟ್ಟು ನೀರು ತುಂಬಿಸಿ ಪಶುಪಕ್ಷಿಗಳು ನೀರು ಕುಡಿಯಲು ನೆರವಾದರು.ಈ ವೇಳೆ ಮಾತನಾಡಿದ ಸದಿಕ್ಷಕ ಮಹಾಂತೇಶ್ ರವರು ‘ಮತ್ತಷ್ಟು ಕಡೆಗಳಲ್ಲಿ ತೊಟ್ಟಿ ಇಡಲಾಗುವುದು. ಬೇಸಿಗೆಯಲ್ಲಿ ಮನುಷ್ಯರಷ್ಟೇ ಪ್ರಾಣಿ, ಪಕ್ಷಿಗಳಿಗೂ ನೀರು ಅಗತ್ಯ. ಇಲ್ಲಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
ಶಿಕ್ಷಕ ಮಹಾಂತೇಶ್, ಪ್ರಾಣಿಪ್ರಿಯ ಮಹಾನ್, ಪಶು ವೈದ್ಯಾಧಿಕಾರಿ ಶೈಲೇಂದ್ರ ಕುಲಕರ್ಣಿ, ಶ್ರೀನಾಥ್, ನಾರಾಯಣಸ್ವಾಮಿ ಹಾಜರಿದ್ದರು.