Sunday, April 28, 2024
spot_img
HomeBangaloreಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಹಾಗು ಎ.ರವಿ ವಿರುದ್ದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಹಾಗು ಎ.ರವಿ ವಿರುದ್ದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ದೇವನಹಳ್ಳಿ: ಅಶ್ವತ್ ನಾರಾಯಣ್ ರವರ ಮೇಲೆ ಕಾಂಗ್ರೇಸ್ ಪಕ್ಷದ ಡಿ.ಕೆ.ಸುರೇಶ್ ದೌರ್ಜನ್ಯ ಮಾಡಿ ಕಾಂಗ್ರೇಸ್ ಪಕ್ಷದ ಪ್ರದರ್ಶನ ಮಾಡಿದ್ದಾರೆ. ದೌರ್ಜನ್ಯಮಾಡಿದವರ ಮೇಲೆ ಕೂಡಲೆ ಕೇಸು ದಾಖಲಿಸಿ ಕ್ರಮಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಹಳೆ ಬಸ್‌ನಿಲ್ದಾಣದಲ್ಲಿ ಬಿಜೆಪಿ ಯುವಮೋರ್ಚವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಡಿ.ಕೆ.ಸುರೇಶ್ ಹಾಗು ಎ.ರವಿ ಪ್ರತಿಕೃತಿಗೆ ಬೆಂಕಿಹಚ್ಚಿ ಮಾತನಾಡಿದ ಅವರು ದೀಪ ಆರುವ ಮುನ್ನ ಯಾವರೀತಿ ಜೋರಾಗಿ ಉರಿಯುತ್ತದೆಯೇ ಅದೇ ಕಾಂಗ್ರೇಸ್ ಪಕ್ಷದ ಡಿ.ಕೆ.ಬ್ರದರ್ಸ್ ವೇದಿಕೆಮೇಲೆ ತಮ್ಮ ನಿಜರೂಪವನ್ನು ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿಗಳ ಎದುರಿನಲ್ಲೇ ತಮ್ಮ ಗೂಂಡಾಗಿರಿಯನ್ನು ತೋರಿಸಿದ್ದಾರೆ. ವೇದಿಕೆ ಮೇಲೆ ಅಶ್ವತ್ ನಾರಾಯಣ್ ರವರಿಂದ ಮೈಕ್ ಕಸಿದು ಕೊಂಡು ಗೂಂಡಾವರ್ತನೆಯನ್ನು ಪ್ರದರ್ಶಿಸಿರುವುದು ರಾಜ್ಯದ ಜನತೆ ಯೊಚನೆ ಮಾಡಬೇಕು. ಇದನ್ನು ಹಿಗೆ ಬಿಟ್ಟರೆ ಈ ಪಿಡುಗು ಎಲ್ಲೆಡೆ ಹಬ್ಬಿಕೊಳ್ಳಲಿದೆ ಆಗಾಗಿ ಅವರನ್ನು ಮಟ್ಟಹಾಕಬೇಕು, ಕೂಡಲೆ ಅವರಮೇಲೆ ಕೇಸು ದಾಖಲಿಸಿ ಅವರನ್ನು ಬಂದಿಸಿ ನ್ಯಾಯದೊರಕಿಸಿಕೊಡಬೇಕು. ಆಗಾಗಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರಕಾರ ತುರ್ತು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಎಸ್ಸಿಮೋರ್ಚ ಖಜಾಂಚಿ ಎ.ಕೆ.ಪಿ.ನಾಗೇಶ್ ಮಾತನಾಡಿ ಕಾಂಗ್ರೇಸ್‌ನ ಡಿ.ಕೆ.ಸುರೇಶ್ ಹಾಗು ಎ.ರವಿ ತೊರಿರುವ ಗೂಂಡಾಗಿರಿಯನ್ನು ನಾವು ಖಂಡಿಸುತ್ತೇವೆ. ಇಂತಹ ಗೂಂಡಾವರ್ತನೆ ಕಾಂಗ್ರೇಸ್‌ನವರದ್ದು. ಇಂತಹ ಗೂಂಡಾಗಳಿರುವ ಪಕ್ಷ ಮುಂದೆ ಅಧಿಕಾರಕ್ಕೆ ಬಂದರೆ ರಾಜ್ಯ ಗೂಂಡಾರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸಿದರೆ ನಾವು ಕಪುö್ಪಪಟ್ಟಿ ಪ್ರದರ್ಶನಮಾಡುತ್ತೇವೆ ಎಂದರು.

ಇದೆ ವೇಳೆ ಮಾಜಿ ಶಾಸಕ ಹಾಗು ಬಿಜೆಪಿ ಹಿರಿಯ ಮುಖಂಡ ಜಿ.ಚಂದ್ರಣ್ಣ, ಜಿಲ್ಲಾ ರೈತಮೋರ್ಚ ಅಧ್ಯಕ್ಷ ರವಿಕುಮಾರ್, ಮಾಜಿ ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಯುವಮೋರ್ಚ ಕಾರ್ಯಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments