ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ: ಭಾರತೀಯ ಜನತಾ ಪಾರ್ಟಿ ಚಿಕ್ಕಬಳ್ಳಾಪುರ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಭಯೋತ್ಪಾದಕ ದೇಶ ಪಾಕಿಸ್ತಾನ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಭಯೋತ್ಪಾದನೆಯನ್ನು ವಿಶ್ವಕ್ಕೆ ಸರಿರುವ ಪಾಕಿಸ್ತಾನ ಅದರ ವಿದೇಶಾಂಗ ಸಚಿವ ಬಿಲವಾಲ್ ಭುಟ್ಟೋ ಜಾದಾರಿ ವಿಶ್ವ ನಾಯಕ ಭಾರತ ಜನಪ್ರಿಯ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರನ್ನು ಬುಚರ್ ಆಪ್ ಗುಜರಾತ್, ಗುಜರಾತಿನ ಸಾವಿನ ವ್ಯಾಪಾರಿ ಹಾಗೂ ಬಿನ್ ಲಾಡೆನ್ ಹೋಲಿಕೆ ಮಾಡಿರುವ ಅತ್ಯಂತ ಕೃತ್ಯ ಪಾಕಿಸ್ತಾನ ಈ ಕೂಡಲೇ ಭೇಷರತ್ ಕ್ಷಮೆಯಾಚನೆ ಮಾಡಬೇಕಾಗಿ ಅಗ್ರಹ ಮಾಡಿದ್ದೆವು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಆನಂದ್ ಅನು, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಸೊಪ್ಪಹಳ್ಳಿ ಎನ್.ರಾಮಕೃಷ್ಣ, ನಗರ ಪ್ರಧಾನ ಕಾರ್ಯದರ್ಶಿ ನರೇಂದ್ರ, ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಭಾರತೀ, ನಗರ ಮತ್ತು ಗ್ರಾಮಾಂತರ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಸೌಮ್ಯ, ಪ್ರಭ, ಸುಮಿತ್ರ, ಮಾಧ್ಯಮ ಪ್ರಮುಖ ಮಧುಚಂದ್ರ, ಬಿಜೆಪಿ ಮುಖಂಡರಾದ ಎಸ್.ಆರ್.ಎಸ್.ದೇವರಾಜ್, ಲಕ್ಷ್ಮಿನಾರಾಯಣ ಗುಪ್ತ, ಬೈರೇಗೌಡ, ರಾಮಣ್ಣ, ಶಟ್ಗೆರೆ ವೆಂಕಟೇಶ್, ಆರ್.ನಾರಾಯಣಪ್ಪ, ಅಶೋಕ್, ಲಕ್ಷ್ಮಿಪತಿ, ಡಿ.ಪಿ.ಸಂತೋಷ್, ಶಿವಕುಮಾರ್ ಉಪಸ್ಥಿತರಿದ್ದರು.