Tuesday, April 30, 2024
spot_img
HomeChikballapurಫೆಬ್ರವರಿ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ:ಡಿಸಿ ಸೂಚನೆ

ಫೆಬ್ರವರಿ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ:ಡಿಸಿ ಸೂಚನೆ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಗಾಂಧೀ ಭವನ ಮತ್ತು ಗುರು ಭವನ ಕಟ್ಟಡ  ಹಾಗೂ  ಅರೂರು  ಬಳಿಯ ಸರ್ಕಾರಿ  ವೈದ್ಯಕೀಯ  ಕಾಲೇಜು  ಕಟ್ಟಡಗಳ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಮಂಗಳವಾರ ಖುದ್ದು ಕಾಮಗಾರಿ   ನಡೆಯುತ್ತಿರುವ ಸ್ಥಳಗಳಿಗೆ  ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿ, ಸುಮಾರು 3 ಕೋಟಿ ವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿ ಗಾಂಧಿ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರಪಿತ, ಮಹಾತ್ಮ ಗಾಂಧಿಜೀಯವರ ವಿಚಾರಧಾರೆಗಳನ್ನು ಹಾಗೂ  ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ  ಅರ್ಥ  ಪೂರ್ಣ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ಉದ್ದೇಶದಿಂದ  ಗಾಂಧಿ ಭವನವನ್ನು ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ  ನಿರ್ಮಿಸಲಾಗುತ್ತಿದೆ. ಮುಂದಿನ ಫೆಬ್ರವರಿ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು  ಗುತ್ತಿಗೆದಾರರು ಮತ್ತು ನಿರ್ಮಿತಿ ಕೇಂದ್ರದ  ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಶೈಕ್ಷಣಿಕ ಕಲಿಕಾ ಕಾರ್ಯಕ್ರಮಗಳನ್ನು ಉತ್ತೇಜಿಸಲು ಪೂರಕವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಗುರುಭವನವನ್ನು ನಿರ್ಮಿಸಲಾಗುತ್ತಿದೆ. ಭವನದ  ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆಗಳನ್ನು  ನೀಡಿದರು.ನಂತರ  ಚಿಕ್ಕಬಳ್ಳಾಪುರ  ತಾಲೂಕಿನ   ಅರೂರು  ಬಳಿ  ನಿರ್ಮಾಣ  ಕಾಮಗಾರಿ  ಅಂತಿಮ ಹಂತದಲ್ಲಿರುವ  ಸರ್ಕಾರಿ  ವೈದ್ಯಕೀಯ  ಕಾಲೇಜಿನ  ಕಾಮಗಾರಿಗಳನ್ನು   ವೀಕ್ಷಣೆ  ಮಾಡಿ  ಅಗತ್ಯ  ಸಲಹೆ  ಸೂಚನೆಗಳನ್ನು  ಯೋಜನಾ  ಅಭಿಯಂತರರಿಗೆ  ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯರಾಮರೆಡ್ಡಿ, ಜಿಲ್ಲಾ  ಶಸ್ತ್ರಚಿಕಿತ್ಸಕ ರಾಜರೆಡ್ಡಿ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ನಿರ್ಮಿತಿ ಕೇಂದ್ರದ ಅಭಿಯಂತರ ತೇಜಸ್ ಗೌಡ,ಲೋಕೋಪಯೋಗಿ  ಇಲಾಖೆಯ  ಅಭಿಯಂತರ ಸಂತೋಷ್  ಕುಮಾರ್ ಹಾಗೂ  ಗುತ್ತಿಗೆದಾರರು ಸೇರಿದಂತೆ ಇನ್ನಿತರರು ಇದ್ದರು


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments