ಚಿಕ್ಕಬಳ್ಳಾಪುರ: ಕೆ.ಪಿ.ಸಿ.ಸಿ ಸದಸ್ಯರಾದ ಎನ್.ವಿನಯ್ (ಶ್ಯಾಮ್)ರವರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಮೈಲಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ.ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಈ ಸಂದರ್ಭ ವಿನಯ್ ಶ್ಯಾಮ್ ರವರು ಮಾತನಾಡಿ ನನ್ನೂರು ನಮ್ಮವರು ಎಂಬ ವೇದ ವಾಕ್ಯದಲ್ಲಿ ನಮ್ಮ ಊರಿನ ಜನರ ಸಮಸ್ಯೆಗಳನ್ನು ಅರಿತು ಮುಂದೆ ಶಾಶ್ವತ ಪರಿಹಾರವನ್ನು ಕಲ್ಪಿಸಲು ನಾನು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ. ಹಾಗೇಯೆ.ನಮ್ಮ ಊರಿನ ಜನರಿಗೆ ಹಾಗೂ ದೇಶಾದ್ಯಂತ ಯಾರೇ ಬಂದರು ಉಚಿತ ಚಿಕಿತ್ಸೆ ನೀಡುವ ಸಲುವಾಗಿ ಕ್ಯಾನ್ಸರ್ ಆಸ್ಪತ್ರೆಯನ್ನು ಮಾಡುವುದು ನನ್ನ ಬಹು ದೊಡ್ಡದಾದ ಕನಸು ಎಂದು ನುಡಿದ್ದರು.
ಈ ಸಂದರ್ಭದಲ್ಲಿ ಶೇಖರಪ್ಪ ರವರು, ಕಳವಾರ ಅರುಣ್, ಸಮ್ಮಿಉಲ್ಲಾ, ಸತೀಶ್ ರವರು, ನಾಯನಹಳ್ಳಿ ನಾರಯಣಸ್ವಾಮಿ ರವರು, ಮಂಜು, ವೆಂಕಟೇಶ್, ರಾಮು, ನಗರಸಭಾ ಸದಸ್ಯರಾದ ಅಂಬರೀಶ್, ನರಸಿಂಹಮೂರ್ತಿ, ಮುಖಂಡರಾದ ಸಂತೋಷ್, ನಂದೀಶ್, ವೇಣು, ಸುನೀಲ್, ವೆಂಕಟೇಶ್, ಅರುಣ್, ಮುನೀಂದ್ರ ಮುಂತಾದವರು ಉಪಸ್ಥಿತರಿದ್ದರು.