ದೇಶಕ್ಕೆ ಪ್ರಭಾವಿ ಪ್ರಧಾನಿಯಾಗುವ ಜೊತೆಗೆ ವಿಶ್ವ ನಾಯಕನನ್ನು ನೀಡಿದ ಮಹಾತಾಯಿ ವಿವಶರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಹೆತ್ತ ತಾಯಿಯನ್ನು ಕಳೆದುಕೊಂಡ ನೋವು ಭರಿಸುವ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವಂತ ಕರುಣಿಸಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಾರ್ಥಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತಾಯುಷಿ ತಾಯಿಯ ಆಶೀರ್ವಾದ, ಪ್ರೀತಿಯೇ ಪ್ರಧಾನಿಯವರನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ವಯೋಸಹಜ ಮರಣವನ್ನು ಅವರು ಹೊಂದಿದ್ದಾರೆ. ತಾಯಿ ಅಗಲಿಕೆ ಎಷ್ಟು ನೋವು ಕೊಡಲಿದೆ ಎಂಬುದು ಸ್ವತಃ ಅನುಭವದಿಂದ ಕಂಡಿದ್ದೇನೆ, ಹಾಗಾಗಿ ಪ್ರಧಾನಿ ಮೋದಿಯವರಿಗೆ ನೋವು ಭರಿಸುವ ಶಕ್ತಿ ನೀಡಲಿ ಮತ್ತು ಆ ಮಹಾ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು