ಪಾಲಾರ್ ಪತ್ರಿಕೆ | Palar Patrike
ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿoಗ್ವಿಭಾಗ ಹಾಗೂ ಸಿವಿಲ್ ಎಂಜಿನಿಯರಿoಗ್ ಅಸೋಸಿಯೇಷನ್ ಸಹಯೋಗದೊಂದಿಗೆ “ನಿರ್ಮಾಣ್-2022-23″ ಕಾರ್ಯಕ್ರಮವನ್ನು ಕ್ಯಾoಪಸ್ನ ಪಿಜಿ ಸೆಮಿನಾರ್ ಹಾಲ್ನಲ್ಲಿ ಉದ್ಘಾಟಿಸಲಾಯಿತು.
ಬೆಂಗಳೂರಿನ ಇಂಡಿಯನ್ಇನ್ಸ್ಟಿಟ್ಯೂಟ್ಆಫ್ ಸೈನ್ಸ್ ಹಾಗೂ ಕರ್ನಾಟಕರಾಜ್ಯ ವಿಜ್ಞಾನತಂತ್ರಜ್ಞಾನ ಮಂಡಳಿಯ (ಕೆಎಸ್ಸಿಎಸ್ಟಿ) ಮುಖ್ಯ ವೈಜ್ಞಾನಿಕಅಧಿಕಾರಿಡಾ.ಯು.ಟಿ. ವಿಜಯ್ ನಿರ್ಮಾಣ್-2022-23ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಕೆಎಸ್ಸಿಎಸ್ಟಿ ವತಿಯಿಂದಗ್ರಾಮೀಣ ವಿದ್ಯಾರ್ಥಿಗಳಿಗೆ ವರ್ಚುಯಲ್ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ.ಸಿವಿಲ್ ಎಂಜನಿಯರ್ಗಳು ಕಟ್ಟಡ ನಿರ್ಮಾಣ ಮಾಡುವುದರಮೂಲಕ ವಿಶ್ವ ಮತ್ತುರಾಷ್ಟವನ್ನು ನಿರ್ಮಾಣ ಮಾಡುತ್ತಾರೆಎಂದರು.
ಕಟ್ಟಡರಚನೆ, ರಸ್ರೆ ನಿರ್ಮಾಣ, ಡ್ಯಾಂ ಮತ್ತುಕೆರೆ ಕಟ್ಟೆಗಳನ್ನು ನಿರ್ಮಿಸುವಲ್ಲಿಸಿವಿಲ್ ಎಂಜಿನಿಯರ್ಗಳ ಪಾತ್ರ ಮುಖ್ಯವಾಗಿದೆ.ಒಂದು ಸಂಶೋಧನೆ ಪ್ರಕಾರ ಶೇ.80ರಷ್ಟು ತೇರ್ಗಡೆಯಾಗುವ ಎಂಜಿನಿಯರ್ಗಳಿಗೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವಕೌಶಲ್ಯವಿರುವುದಿಲ್ಲ. ಸುಮಾರುಆರು ತಿಂಗಳು ಕಾಲ ಕೈಗಾರಿಕೆಗಳಲ್ಲಿ ಇಂತಹ ಹೊಸ ಎಂಜನಿಯರಿAಗ್ ವಿದ್ಯಾರ್ಥಿಗಳಿಗೆತರಬೇತಿ ನೀಡಿದರೆಸ್ವಲ್ಪ ಮಟ್ಟಿಗೆಕೌಶಲ್ಯ ಬೆಳೆಸಿಕೊಳ್ಳುತ್ತಾರೆ.ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸಲು ಪ್ರಾಜೆಕ್ಟ್ಗಳನ್ನು ಮಾಡಿಸಬೇಕುಎಂದುಅವರು ಸಲಹೆ ನೀಡಿದರು.
ಕಾರ್ಯಕ್ರಮದಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಮತ್ತು ಹಳೆಯ ಕಾಲದಕೆರೆಕಟ್ಟೆ ನಿರ್ಮಾಣಕಾರ್ಯ ಹೇಗಿತ್ತುಎಂಬುದರ ಬಗ್ಗೆಪಿಪಿಟಿ ಮೂಲಕ ಎಳೆ ಎಳೆಯಾಗಿ ವಿವರಿಸಿ ಸಂದೇಹ ಬಂದAತಹ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಬಗೆಹರಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಕೆ.ಕರುಣಾಕರ ಮಾತನಾಡಿ, ಸಿವಿಲ್ ಎಂಜಿನಿಯರಿAಗ್ ವಿಭಾಗವು ಸ್ವಾತಂತ್ರ್ಯ ನಂತರದಕಾಲದಲ್ಲಿ ಅನೇಕ ಬದಲಾವಣೆಗಳನ್ನು ತಂದುಉನ್ನತ ಸಾಧನೆ ಮಾಡಿದೆಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ,ಸಾಹೇ ರಿಜಿಸ್ಟ್ರಾರ್ಡಾ. ಎಂ.ಝೆಡ್.ಕುರಿಯನ್,ಡಾ.ಎA.ಸಿದ್ದಪ್ಪ, ಡಾ.ಎಚ್ ವೇಣುಗೋಪಾಲ್, ಸಿವಿಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥಡಾ.ಎಸ್.ಆರ್.ರಮೇಶ್ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.