ಪಾಲಾರ್ ಪತ್ರಿಕೆ | Palar Patrike
ಶಿಡ್ಲಘಟ್ಟ: ಎಬಿಡಿ ಟ್ರಸ್ಟ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಕೋ ಆರ್ಡಿನೇಟರ್ ಆದ ಶ್ರೀಯುತ ರಾಜೀವ್ ಗೌಡರು ( ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ) ಹಾಗೂ ಧರ್ಮಪತ್ನಿ ಶ್ರೀಮತಿ ಸಹನಾ ರಾಜೀವ್ ಗೌಡ ರವರು ನಿನ್ನೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕುಂಭಿಗಾನಹಳ್ಳಿ ಪಂಚಾಯಿತಿಯ ಹೇಮರ್ಲಹಳ್ಳಿ ಗ್ರಾಮದ ವಿವಿಧ ಭಾಗಗಳ ಎಲ್ಲಾ ಧರ್ಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಾಗೂ ಅಭಿವೃದ್ಧಿಗೆ ಸುಮಾರು 7 ಲಕ್ಷ ರೂಗಳ ಚೆಕ್ ಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಜನಪ್ರತಿನಿಧಿಗಳು ಪಂಚಾಯತಿ ಸದಸ್ಯರುಗಳು ಹಾಗೂ ಊರಿನ ಗ್ರಾಮಸ್ಥರು ಮತ್ತು ಎಬಿಡಿ ಸದಸ್ಯರು ಹಾಜರಿದ್ದರು.