Tuesday, April 23, 2024
spot_img
HomeRamnagarರಾಮನಗರದಲ್ಲಿ ರಾಮನ ಹೆಸರಿನಲ್ಲಿ ನಡೆಯಲಿದೆ ಚುನಾವಣೆ:ಸಿ.ಪಿ.ಯೋಗೇಶ್ವರ್

ರಾಮನಗರದಲ್ಲಿ ರಾಮನ ಹೆಸರಿನಲ್ಲಿ ನಡೆಯಲಿದೆ ಚುನಾವಣೆ:ಸಿ.ಪಿ.ಯೋಗೇಶ್ವರ್

ಪಾಲಾರ್ ಪತ್ರಿಕೆ | Palar Patrhike

ರಾಮನಗರ:  ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಬಿಜೆಪಿ ವತಿಯಿಂದ ಬೆಳ್ಳಿ ಇಟ್ಟಿಗೆಗೆ ಜಿಲ್ಲೆಯ ಕೆಂಗಲ್ ಹನುಮಂತರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು ಮುಂದಿನ ಬಾರಿ ರಾಮನಗರದಲ್ಲಿ ಬಿಜೆಪಿ ಪತಾಕೆ ಹಾರಬೇಕು ಎಂದು ಹೇಳಿದರು.

ರಾಮನಗರ ಜಿಲ್ಲೆಯಾದ್ಯಂತ ರಾಮನ ಭಕ್ತರು ಬಿಜೆಪಿ ಒಲವು ತೋರಬೇಕು. ಮುಂದಿನ ದಿನಗಳಲ್ಲಿ ರಾಮನಗರದಲ್ಲಿ ರಾಮನ ಹೆಸರಿನಲ್ಲಿ ಚುನಾವಣೆ ನಡೆಯಲಿದೆ. ಹಿಂದುತ್ವದ ನಾಯಕರು ಹುಟ್ಟಿಬರುವ ಜೊತೆಗೆ ಜನಪ್ರತಿನಿಧಿಗಳು ಆಗಲಿ. ಆದ್ದರಿಂದ ಶ್ರೀರಾಮನಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಅಯೋಧ್ಯಗೆ ಕಳುಹಿಸುತ್ತಿರುವ ಬೆಳ್ಳಿ ಇಟ್ಟಿಗೆ ಬಗ್ಗೆಯೂ ಮಾತನಾಡಿದ ಅವರು, ರಾಮನಗರ ಭಕ್ತಾದಿಗಳ ವತಿಯಿಂದ ಬೆಳ್ಳಿ ಇಟ್ಟಿಗೆ ಕೊಡಲಾಗುತ್ತಿದೆ. ಈಗಾಗಲೇ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದು ರಾಮರ ದರ್ಶನವಾಗಲಿ. ಈ ಹಿಂದೆ ಕರಸೇವಕರು ರಾಮಮಂದಿರ ಆಗಬೇಕು ಅಂತ ಕೂಗು ಇತ್ತು. ಅವತ್ತು ಲಕ್ಷಾಂತರ ಜನರು ಇಲ್ಲಿಂದ ಇಟ್ಟಿಗೆ ಹೊತ್ತಿದ್ದರು. ಆದರೆ ಈಗ ರಾಮಮಂದಿರ ಪೂರ್ಣ ಆಗ್ತಿದೆ. ಆದ್ದರಿಂದ ಸಾಂಕೇತಿಕವಾಗಿ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಸಮರ್ಪಿಸಲಾಗುತ್ತಿದೆ. ಇದಕ್ಕೆ ನಮ್ಮ ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಪೂಜೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments