ಮೈಸೂರು-ಮೌಂಟ್ ಅಬು (ರಾಜಾ ಸ್ಥಾನ) ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಶೋಧಕರು ಡಾ.ಬ್ರಹ್ಮಾಕುಮಾರ ಬಸವರಾಜ ರಾಜ ಋಷಿರವರಿಗೆ ಮೈಸೂರು ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದ ಮಹಾಪ್ರಬಂದ “ಭಗವದ್ಗೀತೆಯ ಭಗವಾನ್ ಈಶ್ವರ ಅವನ ಅವತಾರ ಮತ್ತು ಕರ್ತವ್ಯ” -ಒಂದು ಆಧ್ಯಾತ್ಮಿಕ ಅಧ್ಯಯನ ಕುರಿತ ಮಹಾಗ್ರಂಥವನ್ನು ಅಂತರಾಷ್ಟ್ರೀಯ ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಉಷಾ ದೀದಿ ಅಬು ಪರ್ವತದಲ್ಲಿರುವ ಡೈಮಂಡ್ ಜೂಬಲಿ ಹಾಲ್ ನಲ್ಲಿ ಲೋಕಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಲೇಖಕರಾದ ಬಿ.ಕೆ.ಬಸವರಾಜ ಋಷಿ, ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಹಾಜರಿದ್ದರು..