ಚಿಂತಾಮಣಿ: ಸ್ವಪಕ್ಷೀಯರ ಕುತಂತ್ರ ವಿರೋಧ ಮತ್ತು ಬಿ.ಜೆ.ಪಿ.ಯವರ ಅಧಿಕಾರ ಮತ್ತು ಹಣ ಬಲದ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ ಸೇವೆಯನ್ನು ಸಲ್ಲಿಸಿದ್ದ ಅನಿಲ್ ಕುಮಾರ್ ರವರು ವಿಧಾನ ಪರಿಷತ್ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವುದು ಅತ್ಯಂತ ಹರ್ಷಣೀಯವಾಗಿದೆ. ಚುನಾವಣೆಯ ನೇತೃತ್ವ ವಹಿಸಿದ್ದ ಶಾಸಕ ರಮೇಶ್ ಕುಮಾರ್ ಹಾಗು ಎಲ್ಲಾ ಕಾಂಗ್ರೆಸ್ ಶಾಸಕ ಮತ್ತು ಮುಖಂಡರ ನಾಯಕತ್ವವು ಬಿ.ಜೆ,ಪಿ.ಗೆ ಸವಾಲು ಎಸೆದು ಗೆಲುವು ಸಾಧಿಸಿದ್ದು ಅವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿರುವುದಾಗಿ ಮಾಜಿ ನಗರಸಭಾ ಸದಸ್ಯ ಎಸ್. ಸುಬ್ರಮಣ್ಯಂ ಹರ್ಷವ್ಯಕ್ತಪಡಿಸಿದ್ದಾರೆ.