Thursday, March 28, 2024
spot_img
HomeMandyaಹಲಗೂರಿನಲ್ಲಿಂದು "ಜ್ಞಾನ ಕಸ್ತೂರಿ‌ ಭವನ" ಲೋಕಾರ್ಪಣೆ

ಹಲಗೂರಿನಲ್ಲಿಂದು “ಜ್ಞಾನ ಕಸ್ತೂರಿ‌ ಭವನ” ಲೋಕಾರ್ಪಣೆ

 ಹಲಗೂರು : ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೋಕಿನ ಸಮೀಪದಲ್ಲಿರುವ ಹಲಗೂರಿನಲ್ಲಿ  ಚನ್ನಪಟ್ಟಣ ರಸ್ತೆ ಜೆ.ಸಿ.ಎಮ್ ಬಡಾವಣಿಯಲ್ಲಿ ನೂತನವಾಗಿ ನಿರ್ಮಿಸಿರುವ  ಜ್ಞಾನ ಕಸ್ತೂರಿ ಭವನವನ್ನು ಸಾರ್ವಜನಿಕರ ಸೇವೆಗಾಗಿ  ಭಾನುವಾರ  11-12-2022 ಬೆಳಗ್ಗೆ 11.00 ಗಂಟೆಗೆ  ಲೋಕಾರ್ಪಣೆ ಮಾಡಲಾಗುವುದು ಎಂದು  ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ   ರೇಖಾಜಿ ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.  ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ  ಲಕ್ಷ್ಮೀಜಿ ಮುಖ್ಯ ಸಂಚಾಲಕರು, ಈವಿವಿ ಮೈಸೂರು ಉಪ ವಲಯ,  ಆಶೀರ್ವಚನ  ಶ್ರೀ ಶ್ರೀ  ಕೃಪಾನಂದ ಸ್ವಾಮೀಜಿ ಆದಿಚುಂಚನಗಿರಿಯ ಶಾಖಾ ಮಠ ರಾಮನಗರ, ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಕೆ.ಅನ್ನದಾನಿ ಮಳವಳ್ಳಿ ಉದ್ಘಾಟನೆಯನ್ನು ರಾಜಯೋಗಿನಿ ಬ್ರಹ್ಮಾಕುಮಾರಿ  ಗೀತಾ ದೀದಿ ಈವಿವಿ, ಅಬುಪರ್ವತ,ಹಾಗೂ ಗ್ರಾಮ ಪಂಚಾಯತಿ  ಅಧ್ಯಕ್ಷರು, ಡಾ.ಸಿದ್ದರಾಜು ಜಿ.ಎಮ್,ಆರ್.ಟಿ.ಓ. ಇನ್ಸ್ ಪೆಕ್ಟರ್  ಸುರೇಶ್ ಜಿ.ಎಮ್ ಭಾಗವಹಿಸುವರು ಎಂದಿದ್ದಾರೆ.ಬೆಳಗ್ಗೆ 9 ಗಂಟೆಗೆ  ಸೇವಾಕೇಂದ್ರದಿಂದ ಶಾಂತಿ ಸದ್ಭಾವನಾ ಯಾತ್ರೆಯನ್ನು  4 ಜಿಲ್ಲೆಗಳ ಬ್ರಹ್ಮಾಕುಮಾರ‌ ಬ್ರಹ್ಮಾಕುಮಾರಿಯರಿಂದ ಏರ್ಪಡಿಸಲಾಗಿದೆ. ಡಿಸೆಂಬರ್ 12 ರಿಂದ ರಾಜಯೋಗ ಶಿಕ್ಷಣ ‌ತಜ್ಞ ಬ್ರಹ್ಮಾಕುಮಾರ‌ ಪ್ರಾಣೇಶ್ ಜೀಯವರು “ನೆಮ್ಮದಿಯ ಜೀವನಕ್ಕೆ ರಾಜಯೋಗ ದ್ಯಾನವೇ ದಿವ್ಯ ಔಷದ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments