Thursday, April 25, 2024
spot_img
HomeChikballapurಓಂ ಶಕ್ತಿ ದೇವಾಲಯಕ್ಕೆ ಹೋಗಲು ಉಚಿತ ಭಕ್ತರಿಗೆ ಬಸ್ ಸೇವೆ

ಓಂ ಶಕ್ತಿ ದೇವಾಲಯಕ್ಕೆ ಹೋಗಲು ಉಚಿತ ಭಕ್ತರಿಗೆ ಬಸ್ ಸೇವೆ

ಪಾಲಾರ್ ಪತಿಕ್ರೆ | Palar pathrike

ದೇವನಹಳ್ಳಿ: ದೇವನಹಳ್ಳಿ ತಾಲೂಕಿನಿಂದ ಓಂ ಶಕ್ತಿ ಮಾಲಾಧಾರಿಗಳು ಎಷ್ಟೇ ಜನ ಹೋದರೂ ಅದಕ್ಕೆ ಬಸ್ ವ್ಯವಸ್ಥೆ ಉಚಿತವಾಗಿ ಮಾಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ೧೧ ನೇ ವಾರ್ಡ್ ಸಾದೂರ್ ಮಠದ ಮುಂಭಾಗದಲ್ಲಿ ಇಂದು ಮೇಲ್ ಮರವತ್ತೂರ್ ಓಂ ಶಕ್ತಿ ದೇವಾಲಯಕ್ಕೆ ಹೋಗುವ ಮಾಲಾಧಾರಿಗಳಿಗೆ ಉಚಿತವಾಗಿ ದರ್ಶನಕ್ಕೆ ಹೋಗಲು ೨೦ ಕ್ಕೂ ಹೆಚ್ಚು ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿ, ಈ ಭಾಗದ ಓಂಶಕ್ತಿ ಮುಖ್ಯಸ್ಥರಾದ ಸರಸ್ವತಿರವರು ಕೋರಿದ ಮನವಿ ಮೇರೆಗೆ ತಾಲ್ಲೂಕಿನಿಂದ ಓಂಶಕ್ತಿ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ೧೫೦ ಕ್ಕು ಹೆಚ್ಚು ಬಸ್ ವ್ಯವಸ್ಥೆ ಮಾಡಿದ್ದು ತಾಲ್ಲೂಕಿನ ಭಕ್ತಾದಿಗಳು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್ ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷದ ಸೇವಾಕಾಂಕ್ಷಿ ಶಾಂತಕುಮಾರ್ ರವರು ಓಂ ಶಕ್ತಿ ಮಾಲಾಧಾರಿಗಳಿಗೆ ದರ್ಶನಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ತಾಲ್ಲೂಕಿನ ಜನತೆ ಯಾರೇ ಬಂದು ಸಂಪರ್ಕಿಸಿದರೂ ಅವರಿಗೆ ಹೋಗಲು ಅನುಕೂಲ ಮಾಡುತ್ತಾರೆ. ಜನರ ಸೇವೆ ಮಾಡಲು ಪಣತೊಟ್ಟು ಸಮಾಜಮುಖಿ ಕೆಲಸಗಳು ಮಾಡುತ್ತಿದ್ದಾರೆ ಇವರಿಂದ ಸಮಾಜಕ್ಕೆ ಒಳಿತಾಗಲಿ ಜನತೆಯಿಂದ ಮುಂದಿನ ದಿನಗಳಲ್ಲಿ ಶಾಂತಕುಮಾರ್ ರವರಿಗೆ ಒಳಿತಾಗಲಿ ಎಂದು ಹಾರೈಸಿದರು.
ಓಂಶಕ್ತಿಯ ಗುರುಸ್ವಾಮಿ ಸರಸ್ವತಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಓಂಶಕ್ತಿ ದೇವಾಲಯಕ್ಕೆ ತೆರಳಿದ್ದೇವೆ. ಈ ಬಾರಿ ಕಾಂಗ್ರೆಸ್ ಮುಖಂಡ ವಿ.ಶಾಂತಕುಮಾರ್ ಅವರು ಭಕ್ತರಿಗೆ ಅನುಕೂಲವಾಗಲೆಂದು ಬಸ್ ಹಾಗೂ ಬೆಳಗಿನ ಉಪಹಾರ ವ್ಯವಸ್ಥೆ ಕಲ್ಪಿಸಿರುವುದು ಸಂತಸವನ್ನು ತಂದುಕೊಟ್ಟಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಓಂಶಕ್ತಿ ಮಾಲಾಧಾರಿಗಳು ಬಸ್ ಗಳ ಮೂಲಕ ಮೇಲ್ ಮರವತ್ತೂರ್ ಓಂ ಶಕ್ತಿ ದೇವಾಲಯಕ್ಕೆ ಹೊರಟರು. ಮುಖಂಡರಾದ ನಂಜಪ್ಪ, ಬಚ್ಚೇಗೌಡ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ತಾಪಂ ಮಾಜಿ ಸದಸ್ಯ ವೆಂಕಟೇಶ್, ಪುರಸಭಾ ಸದಸ್ಯ ಚಂದ್ರಪ್ಪ, ಮುನಿರಾಜು(ಬರ್ಮ), ಮುಖಂಡರು, ಭಕ್ತಾಧಿಗಳು ಇದ್ದರು.
ಚಿತ್ರ: ೨೪ ಡಿಹೆಚ್‌ಎಲ್ ಪಿ೪
ಓಂ ಶಕ್ತಿ ದೇವಾಲಯಕ್ಕೆ ಹೋಗಲು ಭಕ್ತರಿಗೆ ಉಚಿತ ಬಸ್‌ಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಚಾಲನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments