ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ : ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಗೌನಹಳ್ಳಿಯಲ್ಲಿ ಶ್ರೀ ನೂತನ ಗಂಗಮ್ಮ ವಿಗ್ರಹ ಪ್ರತಿಷ್ಠಾಪನೆ ನೆರೆವೇರಿತು
ಗ್ರಾಮಸ್ಥರು ಹಾಗು ಸುತ್ತಮುತ್ತಲ ಗ್ರಾಮಸ್ಥರ ಮತ್ತು ಭಕ್ತಾಧಿಗಳು ಸಹಕಾರದೊಂದಿಗೆ ಶ್ರೀ ಗಂಗಮ್ಮ ದೇವಸ್ಥಾನವನ್ನು ನಿರ್ಮಿಸಲಾಗಿದ್ದು ವೇ||ಬ್ರ||ಶ್ರೀ ವೆಂಕಟನಾರಾಯಣಶಾಸ್ತಿç ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪ್ರಾತಃಕಾಲ ಯಾಗಶಾಲಾ ಪ್ರವೇಶ, ಗಣಪತಿ ಕಳಶ ಪೂಜೆ, ನವಗ್ರಹ ಪೂಜೆ, ಹೋಮಾದಿಗಳು, ಶ್ರೀ ಗಂಗಮ್ಮ ದೇವರ ಪ್ರಾಣಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಅಲಂಕಾರ, ಬಲಿಹರಣ, ಕೂಶ್ಮಾಂಡಬಲಿ, ನಾರಿಕೇಳ ಬಲಿ, ವಿಶೇಷ ಹೂವಿನ ಅಲಂಕಾರವನ್ನು ಹಮ್ಮಿಕೊಳ್ಳಲಾಗಿತ್ತು.
ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಾಡು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ದೇವಾಲಯದ ಟ್ರಸ್ಟ್ನ ಅಧ್ಯಕ್ಷ ಗಂಗಪ್ಪ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯದರ್ಶಿ ತಿಮ್ಮಪ್ಪ ಸದಸ್ಯರುಗಳಾದ ಆನಂದಕುಮಾರ್, ಮುನಿಸ್ವಾಮಿ, ರಾಮಪ್ಪ, ನಾರಾಯಣಸ್ವಾಮಿ, ದೇವಪ್ಪ, ರಾಮಾಂಜಿನಪ್ಪ, ನರಸಿಂಹಮೂರ್ತಿ, ಗಂಗಪ್ಪ ಮತ್ತಿತರರು ಭಾಗವಹಿಸಿದ್ದರು.