Thursday, April 25, 2024
spot_img
HomeChikballapurಗೋಪೂಜೆಯೊಂದಿಗೆ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ 109ನೇ ಆರಾಧನೋತ್ಸವಕ್ಕೆ ಚಾಲನೆ

ಗೋಪೂಜೆಯೊಂದಿಗೆ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ 109ನೇ ಆರಾಧನೋತ್ಸವಕ್ಕೆ ಚಾಲನೆ

ಪಾಲಾರ್ ಪತ್ರಿಕೆ | Palar Pathrike ಚಿಂತಾಮಣಿ: ನಗರದ ಎನ್.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಗೋಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು.
ಮಂದಿರದ ಉಪಾಧ್ಯಕ್ಷರಾದ ಜಿ.ಹೆಚ್.ರಘುನಾಥ್ ದಂಪತಿಗಳಿAದ ಗೋಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಆರಾಧನೋತ್ಸವಕ್ಕೆ ಅಧಿಕೃತ ಚಾಲನೆ ದೊರಕಿತು.
ಇಂದು ಬೆಳಿಗ್ಗೆ ೫.೩೦ ಕ್ಕೆ ಭೂಪಾಳಿ ಮತ್ತು ಕಾಕಡಾರತಿ, ೭ ಘಂಟೆಗೆ ಪ್ರಧಾನ ಅರ್ಚಕ ರಘುನಾಥ್ ಮತ್ತು ಋತ್ವಿಕರಿಂದ ವೇದ ಪಾರಾಯಣ ಹಾಗು ರುದ್ರಾಭಿಷೇಕ ನಂತರ ಎನ್.ಆರ್.ಬಡಾವಣೆಯ ಮುಖ್ಯಬೀದಿಗಳಲ್ಲಿ ಸಮಸ್ತ ಭಕ್ತಾಧಿಕಗಳಿಂದ ನಗರಸಂಕೀರ್ತನೆ ನಂತರ ಬೆಳಿಗ್ಗೆ ೧೦ ರಿಂದ ೧೨ ರವರೆಗೆ ವಿವಿಧ ಭಜನಾ ಮಂಡಳಿರವರಿAದ ದೇವರನಾಮಗಳು, ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸಂಜೆ ೬ಕ್ಕೆ ಶ್ರೀ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣ, ಸಂಜೆ ೬.೪೫ಕ್ಕೆ ಸಂಕಷ್ಟಹರಗಣಪತಿ ವ್ರತ ಪೂಜಾ ಕೈಂಕರ್ಯಗಳು ನೆರವೇರಿತು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments