ಪಾಲಾರ್ ಪತ್ರಿಕೆ | Palar Patrike ಚಿಂತಾಮಣಿ : ತಾಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಲಕ್ಷಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಾರ್ಗಶಿರ ಮಾಸದ ಹುಣ್ಣಿಮೆಯಂದು ರಾತ್ರಿ ವಿಷ್ಣು ದೀಪೋತ್ಸವವನ್ನು ಶಾಸ್ತೊçÃಕ್ತವಾಗಿ ವಿಜೃಂಭಣೆಯಿAದ ಆಚರಿಸಲಾಯಿತು.
ದೀಪೋತ್ಸವದ ಪ್ರಯುಕ್ತ ಭಕ್ತರು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದಲ್ಲಿ ಮಣ್ಣಿನ ಹಣತೆಗಳನ್ನು ಹಚ್ಚಲಾಯಿತು. ದೇವಾಲಯವನ್ನು ದೀಪಗಳಿಂದ ಆಲಂಕರಿಸಲಾಗಿತ್ತು. ದೇವಾಲಯದ ರಾಜಗೋಪುರದ ಮುಂದೆ ಇರುವ ಮೂರು ದೀಪಸ್ತಂಭಗಳಿಗೂ ದೊಡ್ಡ ದೀಪಗಳನ್ನು ಹಚ್ಚಿ ಇಡಲಾಯಿತು. ಎತ್ತರದ ದೀಪಸ್ತಂಭಗಳನ್ನು ಹತ್ತಲು ಅಟ್ಟಣಿಗೆ ಹಾಕಲಾಗಿತ್ತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|| ಎಂ.ಆರ್.ಜಯರಾಮ್ಗಳು ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗರ್ಭಗುಡಿಯಲ್ಲಿರುವ ಶ್ರೀಲಕ್ಷಿ ವೆಂಕಟರಮಣಸ್ವಾಮಿಗೆ ಹಾಗೂ ಲಕ್ಷಿ ಅಮ್ಮನವರಿಗೆ ದೇವಾಲಯದಲ್ಲಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಅಷ್ಟವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು.