ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ : ನಗರದ ಎನ್.ಆರ್.ಬಡಾವಣೆಯಲ್ಲಿರುವ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ಶ್ರೀಬ್ರಹ್ಮಚೈತನ್ಯ ಮಹಾರಾಜರ ೧೦೯ ನೇ ಆರಾಧನೋತ್ಸದ ಅಂಗವಾಗಿ ಶನಿವಾರ ರಾತ್ರಿ ಸುಶ್ರಾವ್ಯ ಗಾಯಕ ಅಮೇರಿಕಾದ ಕೃಷ್ಣ ಮಡಕಶಿರ ಭಕ್ತಿಗೀತೆಗಳ ಗಾಯನ ನಡೆಸಿಕೊಟ್ಟರು.
ಸದ್ಗುರು ಶ್ರೀ ತ್ಯಾಗರಾಜಸ್ವಾಮಿಗಳು, ಅನ್ನಮಾಚಾರ್ಯರು ಮತ್ತು ಪುರಂದರದಾಸರ ಕೃತಿಗಳ ಗಾಯನ್ನವನ್ನು ಸುಶ್ರಾವ್ಯವಾಗಿ ಹಾಡಿದ ಕೃಷ್ಣ ಅದರಲ್ಲಿ ಇರುವ ಭಕ್ತಿಯ ವಿವರಣೆಯನ್ನು ವಿವರಿಸಿ ಕೇಳುಗರಿಕೆ ಮತ್ತಷ್ಟು ಸಂಗೀತದ ರಸದೌತಣವನ್ನು ನೀಡಿದರು. ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಪ್ರಕಾಶ್ ಮೃದಂಗದಲ್ಲಿ, ವಿದ್ವಾನ್ ಗೋವರ್ಧನ ಪಿಟೀಲು ನುಡಿಸಿ ಸಹಕರಿಸಿದರು.