ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ :- ತಮ್ಮ ಕುಟುಂಬದ ಜೊತೆ ನಿಕಟ ಸಂಪರ್ಕಹೊAದಿದ್ದು ಈಗ ತಟಸ್ಥರಾಗಿರುವವರನ್ನು ಸಂರ್ಪಕಿಸುತ್ತಿರುವ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ರವರು ಅಗ್ರಹಾರದ ಮಾಜಿ ನಗರಸಭಾ ಸದಸ್ಯ ಎಸ್.ಸುಬ್ರಮಣ್ಯಂ ರವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರನ್ನು ಆತ್ಮೀಯವಾಗಿ ಸ್ವಾಗತಿಸಿದ ಎಸ್.ಸುಬ್ರಮಣ್ಯಂ ರವರು ದುರದೃಷ್ಟವಶಾತ್ ನಡೆದಿರುವ ಘಟನೆಗಳನ್ನು ಮರೆತು ಎಂದಿನAತೆ ಮಾಜಿ ಶಾಸಕರ ಕುಟುಂಬದೊAದಿಗೆ ಸೌಹಾರ್ದಯುತವಾಗಿ ಇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುತ್ತಾರೆ. ಮಾಜಿ ಶಾಸಕ ಎಂ.ಸಿ.ಸುಧಾಕರ್ ಮಾತನಾಡಿ ಗತಿಸಿರುವ ಕಾಲದ ಬಗ್ಗೆ ವಿಶಾದ ವ್ಯಕ್ತಪಡಿಸಿ ಎಂದಿನAತೆ ತಮ್ಮ ಬೆಂಬಲಕ್ಕೆ ಸಹಕರಿಸಲು ಮನವಿ ಮಾಡಿದ್ದು ಪ್ರಕರಣ ಸುಖಾಂತ್ಯವಾಗಿದೆ.
ಮುಸ್ಲಿಂ ಜನಾಂಗದಲ್ಲಿ ಸಾಕಷ್ಟು ಪ್ರಭಾವವಿರುವ ಸುಬ್ರಮಣ್ಯಂ ರವರ ಸಮಯೋಚಿತ ನಿರ್ಧಾರಕ್ಕೆ ಹಲವಾರು ಮುಸ್ಲಿಂ ಮುಖಂಡರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪರಿಷತ್ ಸದಸ್ಯರು, ಮಾಜಿ ನಗರಸಭಾ ಅಧ್ಯಕ್ಷರು ಹಾಗು ಸದಸ್ಯರು ಇತರೆ ಗಣ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.