Friday, April 19, 2024
spot_img
HomeChikballapurಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್ ವಿ ರವಿಪ್ರಕಾಶ್ ಆಯ್ಕೆ

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್ ವಿ ರವಿಪ್ರಕಾಶ್ ಆಯ್ಕೆ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ಚಿಂತಾಮಣಿ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಎಸ್ ವಿ ರವಿಪ್ರಕಾಶ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘದ ಅಧ್ಯಕ್ಷ ಎಸ್ ಜಯರಾಮ್ ನೇತೃತ್ವದಲ್ಲಿ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎಸ್ ವಿ ರವಿಪ್ರಕಾಶ್ 12 ಮತ ಪ್ರತಿಸ್ಪರ್ಧಿ ಅಭ್ಯರ್ಥಿ ಬಿ ದ್ಯಾವಪ್ಪ 8 ಮತಗಳನ್ನು ಪಡೆದಿದ್ದಾರೆ.
ಜಿಲ್ಲಾಧ್ಯಕ್ಷ ಎಸ್ ಜಯರಾಮ್ ಮಾತನಾಡಿ ಅವಧಿ ಮುಗಿದ ಕಾರಣಗಳಿಂದ ತಾಲ್ಲೂಕು ಘಟಕದÀ ಚುನಾವಣೆ ಪ್ರಕ್ರಿಯೆ ನಡೆದಿದ್ದು ಎಲ್ಲಾ ಸದಸ್ಯರು ಒಟ್ಟುಗೂಡಿ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ ನೂತನ ಅಧ್ಯಕ್ಷರಿಗೆ ಸಹಕಾರ, ಸಹಮತ ನೀಡುವುದರೊಂದಿಗೆ ಎಲ್ಲಾ ಸಂಘದ ಸದಸ್ಯರು ಸಂಘದ ಏಳಿಗ್ಗೆಗಾಗಿ ಶ್ರಮಿಸುವಂತೆ ಕೋರಿದರು.
ನೂತನ ಅಧ್ಯಕ್ಷ ಎಸ್ ವಿ ರವಿಪ್ರಕಾಶ್ ಮಾತನಾಡಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಸಂಘದ ಅಭಿವೃದ್ಧಿಗೆ ನಾನು ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಹಾಗೂ ಅದಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಬೆಂಬಲ ನೀಡಬೇಕೆಂದು ಕೋರಿದರು.
ತಾಲ್ಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಎಂ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್ ಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕಾಗತಿ ನಾಗರಾಜ್, ಕಾರ್ಯದರ್ಶಿ ಬಾಲಕೃಷ್ಣ, ಜಿಲ್ಲಾ ಖಜಾಂಚಿ ರವಿಕುಮಾರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೆಂಕಟೇಶ್, ಅವಿಭಜಿತ ಕೋಲರ ಜಿಲ್ಲೆಯ ಉಸ್ತುವಾರಿ ವಾಸುದೇವ್ ಹೊಳ್ಳ, ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ರಾಧಕೃಷ್ಣ, ಹಿರಿಯ ಸದಸ್ಯರಾದ ಎನ್ ನಟರಾಜ್, ಸಿ.ಎ. ರಮೇಶ್, ರಾಮಕೃಷ್ಣಪ್ಪ, ಗೊಲ್ಲಹಳ್ಳಿ ಶಿವಪ್ರಸಾದ್, ಟಿ ಎಸ್ ನಾಗರಾಜ್, ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಟಿ ಅರ್ಜುನ್, ಜಿಲ್ಲಾ ಸಮಿತಿ ಸದಸ್ಯರಾದ ಚಾಂಡ್ರಹಳ್ಳಿ ರವಿಕುಮಾರ್, ಆರ್ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments