ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ : ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ
ಯೋಜನೆಗಳ ಕಾಮಗಾರಿ ಬಿಲ್ಲುಗಳಲ್ಲಿ ಹಾಗೂ ಇತರೆ
ವಿಚಾರಗಳಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು
ಹಸ್ತಕ್ಷೇಪ ಮಾಡಬಾರದು ಎಂದು ಪೌರಾಡಳಿತ
ನರ್ದೇಶನಾಲಯ ಆದೇಶ ಹೊರಡಿಸಿದೆ. ಪೌರಾಡಳಿತ
ನರ್ದೇಶನಾಲಯದ ಆದೇಶ ಇಂದು ಚಿಕ್ಕಬಳ್ಳಾಪುರ
ನಗರಸಭೆಯ ಸದಸ್ಯರ ನಡುವೆ ಪೀಕಲಾಟಕ್ಕೆ
ಕಾರಣವಾಯಿತು.
ಇಂದು ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಆನಂದರೆಡ್ಡಿ
ಬಾಬು ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆದೇಶದ
ಬಗ್ಗೆ ಬಿಸಿ ಬಿಸಿ ರ್ಚೆ ನಡೆಯಿತು. ಈ ಆದೇಶ ಸದಸ್ಯರ
ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿದ್ದು ಕೂಡಲೇ ಇಂತಹ
ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಡಳಿತ
ಪಕ್ಷದ ಹಾಗೂ ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನಿಂದ
ಆಗ್ರಹಿಸಿದರು. ಈ ವೇಳೆ ಅಧ್ಯಕ್ಷರ ಹಾಗೂ ಸದಸ್ಯರ ನಡುವೆ
ಪರಸ್ಪರ ವಾಗ್ವಾದ ನಡೆಯಿತು.