ಪಾಲಾರ್ ಪತ್ರಿಕೆ | Palar Patrike
ಗುಡಿಬಂಡೆ: ಅಂಗವಿಕಲರ ಮಕ್ಕಳಿಗೆ ಅನುಕಂಪ ತೋರಿಸಬೇಡಿ ಆದಷ್ಟು ಅವರು ಜೀವನದಲ್ಲಿ ಬೇಳೆಯಲು ಅವಕಾಶಗಳನ್ನು ನೀಡಿ, ಸಮಾಜದಲ್ಲಿ ಬಾಳಲು ದೈರ್ಯವನ್ನು ತುಂಬಿ ಪ್ರೋತ್ಸಾಹ ನೀಡಿ ಅವರು ಸಹ ಸಾಮಾನ್ಯ ಜನರಂತೆಯೇ ಸಬಲರು ಯಾವುದೇ ಕ್ಷೇತ್ರದಲ್ಲಿ ಅಂಗವಿಕಲರು ಹಿಂದುಳಿದಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಗುಡಿಬಂಡೆಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಗಂಗರತ್ನಮ್ಮ, ಶಿಕ್ಷಣ ಸಂಯೋಜಕರಾದ ಚಂದ್ರಶೇಖರ್, ನಂಜುಂಡಪ್ಪ, ವಿಶೇಷ ಸಂಪನ್ಮೂಲ ಶಿಕ್ಷಕರಾದ ಜನಪದ ರಾಜಪ್ಪ, ಸುಮಿತ್ರ, ಆದಿನಾರಾಯಣ.ಎ ಮತ್ತು ಮಕ್ಕಳು ಹಾಗೂ ಪೋಷಕರು ಹಾಜರಿದ್ದರು