ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ: ರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕನ್ನಡಪರ ಸಂಘಟನೆ ವತಿಯಿಂದ ನಡೆದ ಕನ್ನಡಿಗರ ಬೃಹತ್ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು, ಪರಮಪೂಜ್ಯ ಶ್ರೀ ಶ್ರೀ ನಂದೀಶ್ವರ ಶಿವಾಚರ್ಯ ಸ್ವಾಮಿಗಳು, ಶ್ರೀ ಶ್ರೀ ರಂಗನಾಥ ರ್ಮ, ಬಿ.ಆರ್. ಶ್ರೀಧರ್ ರ್ಮ ಗುರೂಜಿ, ರ್ಮಾಧಿಕಾರಿಗಳು ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಅಟ್ಟುಗುಳಿಪುರ ಗ್ರಾಮದ ನಿವಾಸಿಗಳಾದ ಶ್ರೀಮತಿ ರಾಜಮ್ಮ ಮತ್ತು ಶ್ರೀ ಲಿಂಗಪ್ಪ ದಂಪತಿಗಳ ಏಕೈಕ ಪುತ್ರನಾದ ಡಾ. ಮಹೇಶ ಎಲ್ ಅವರಿಗೆ ಶಿಕ್ಷಣ ಕ್ಷೇತ್ರದ ಸೇವೆ, ಶಿಕ್ಷಣದ ಸಾಧನೆ ಮತ್ತು ಸರಳಸಜ್ಜನಿಕೆಯನ್ನು ಗುರುತಿಸಿ ‘ಗಜರತ್ನ’ ಪ್ರಶಸ್ತಿ ನೀಡಿ ಗೌರವ ಪರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು