Friday, April 19, 2024
spot_img
HomeChamarajanagarಮುಷ್ಕರ ಬಿಸಿ: ಕಚೇರಿಗಳೆಲ್ಲ ಮೌನ

ಮುಷ್ಕರ ಬಿಸಿ: ಕಚೇರಿಗಳೆಲ್ಲ ಮೌನ

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ರಾಜ್ಯ ಸರ್ಕಾರಿ ನೌಕರರ  ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗದೆ ಇದ್ದದ್ದರಿಂದ ಜಿಲ್ಲಾಡಳಿತ ಭವನ ಸೇರಿದಂತೆ ಬಹುತೇಕ ಕಚೇರಿಗಳು ಮೌನವಾದವು. ಚಾಮರಾಜನಗರ ಜಿಲ್ಲಾಡಳಿತದ ಮುಂಂಭಾಗದಲ್ಲಿ ಜಿಲ್ಲಾ ಸರ್ಕಾರಿ ನೌಕರರು ಗೇಟ್ ಮುಂದೆ ನಿಂತು ಕಚೇರಿಗೆ ಯಾರು ಹೋಗದೆ ಇರುವ ಹಾಗೆ ತಡೆದು ಮುಷ್ಕರ ನಡೆಸಿದರುಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರಶೇಖರ್ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳಪರಿಷ್ಕರಣೆ ಹಾಗೂ ಹಳೆ ಚಿಂಚಣಿ ಯೋಜನೆಯನ್ನು ಜಾರಿ ಗೊಳಿಸುವ  ಸಂಬಂಧ ದಿನಾಂಕ 21-02-2023 ರಂದು ನಡೆದ ರಾಜ್ಯ ಕಾರ್ಐಕಾರಣಿ ಮತ್ತು ವೃಂದ ಸಂಘಗಳ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ದಿನಾಂಕ01-03-2023 ರ ಬುಧವಾರ ದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವದಿ ಮುಷ್ಕರವನ್ನು ನಡೆಸುತ್ತಿದ್ದೇವೆರಾಜ್ಯ ಸರ್ಕಾರಿ ನೌಕರರ ನ್ಯಾಯಯುತವಾದ  ಬೇಡಿಕೆಯಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು ದಿನಾಂಕ 01-07-2022 ರಿಂದ ಜಾರಿಗೆ ಬರುವಂತೆ ಶೇ.40%ರಷ್ಟು ವೇತನ ಹೆಚ್ಳ ಸೌಲಭ್ಯವನ್ನು  ಸರ್ಕಾರಿ ಆಧೇಶ ಹೊರಡಿಸುವ ಮೂಲಕ ಅನಿಷ್ಟಾನಗೊಳಿಸುವುದು ಇಲ್ಲದಿದ್ದರೆ ರಾಜ್ಯ ಸಂಘದ ಆದೇಶದಂತೆ ಮುಷ್ಕರವನ್ನು ಮುದುವರೆಸಲಾಗುವುದು ತಿಳಿಸಿದರುಚಾಮರಾಜನಗರ ಜಿಲ್ಲೆ ಎಲ್ಲಾ ಸರ್ಕಾರಿ ಇಲಾಖೆಯ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಸರ್ಕಾರಿ  ಇಲಾಖೆಗಳಲ್ಲಿ ನೌಕರರು  ಕೆಲಸ ಮಾಡದೇ ಹೊರಗುಳಿದ್ದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments