ಪಾಲಾರ್ ಪತ್ರಿಕೆ | Palar Pathrike
ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರು ಹಾಗೂ ಪಿ.ಎಸ್.ಎಸ್ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ಆರ್.ಮಿಥುನ್ ರೆಡ್ಡಿ ಬಾಗೇಪಲ್ಲಿ ಪಟ್ಟಣದಲ್ಲಿ ಕ್ಷಯ ರೋಗಿಗಳಿಗೆ 3ನೇ ತಿಂಗಳ ನ್ಯೂಟ್ರೀಷಿಯನ್ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಎಂ.ಆರ್ ಸ್ವಾಭಿಮಾನಿ ಮಿಥುನ್ ರೆಡ್ಡಿ ರವರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆಯಲ್ಲಿ 196 ಕ್ಷಯರೋಗಿಗಳಿಗೆ ನ್ಯೂಟ್ರಿಷಿಯನ್ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪ್ರಜಾ ಸಂಘರ್ಷ ಸಮಿತಿಯ ಮುಖಂಡರಾದ ಚನ್ನರಾಯಪ್ಪ, ಜುಬೇರ್ ಹಾಗೂ ಮುಖಂಡರಾದ ಭಾಸ್ಕರ್ ,ಇನಾಯತ್ತುಲ್ಲಾ, ಫ್ರೂಟ್ ಮುಜೀಬ್ , ಹಾಜರಿದ್ದರು