ಪಾಲಾರ್ ಪತ್ರಿಕೆ | Palar Pathrike
ಬಾಗೇಪಲ್ಲಿ: ಪಟ್ಟಣದ ಪ್ರಜಾ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಪ್ರಜಾ ಸಂಘರ್ಷ ಸಮಿತಿಯ ಮುಖಂಡರಾದ ಚನ್ನರಾಯಪ್ಪರವರು ಪಿ.ಎಸ್.ಎಸ್ ಸಂಘಟನೆಯ ಬೆಂಬಲಿತ ಅಭ್ಯರ್ಥಿ ಮಿಥುನ್ ರೆಡ್ಡಿ ಎಂದು ಘೋಷಣೆ ಮಾಡಿದರು.ಈ ವೇಳೆ ಚನ್ನರಾಯಪ್ಪ ಮಾತನಾಡಿ, ಪ್ರಜಾ ಸಂಘರ್ಷ ಸಮಿತಿ ಒಂದು ಸಂಘಟನೆಯಾಗಿದ್ದು, ಈ ಸಂಘಟನೆ ದಿವಂಗತ ಜಿ.ವಿ .ಶ್ರೀರಾಮ ರೆಡ್ಡಿ ರವರು ಹಾದಿಯಲ್ಲಿ ಸಾಗುತ್ತಿದ್ದು, ಜಿ.ವಿ. ಶ್ರೀರಾಮರೆಡ್ಡಿ ಅವರ ಹೋರಾಟಗಳನ್ನು ಮುಂದುವರಿಸಿಕೊಂಡು ಹೋಗಲು ಸಮಾಜ ಸೇವಕ ಆರ್ ಮಿಥನ್ ರೆಡ್ಡಿ ಅವರಿಗೆ ಬೆಂಬಲ ನೀಡಲು ಈಗಾಗಲೇ ತೀರ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಜಾ ಸಂಘರ್ಷ ಸಮಿತಿ ಹಾಗೂ ಸಮಾಜಸೇವಕ ಮಿಥುನ್ ರೆಡ್ಡಿ ನೇತೃತ್ವದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಹೋರಾಟಗಳ ರೂಪಿಸಲಾಗುವುದು. ಜೊತೆಗೆ ಪಿ.ಎಸ್.ಎಸ್ ಬೆಂಬಲವನ್ನು ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಅವರಿಗೆ ನೀಡಲಾಗುವುದು ಎಂದರು.ನಂತರ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಮಾತನಾಡಿ, ಇಂದು ನನಗೆ ಪ್ರಜಾ ಸಂಘರ್ಷ ಸಮಿತಿಯ ಮುಖಂಡರು ಬೆಂಬಲ ವ್ಯಕ್ತಪಡಿಸಿರುವುದು ನನಗೆ ಆನೆ ಬಲ ಬಂದಿದೆ. ಮುಂದಿನ ದಿನಗಳಲ್ಲಿ ದಿವಂಗತ ಜಿ. ವಿ .ಶ್ರೀರಾಮರೆಡ್ಡಿ ಹಾದಿಯಲ್ಲಿ ಹೋರಾಟಗಳನ್ನು ಕೈಗೊಂಡು ಈ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿ ಮುಖಂಡರು, ಹಾಗೂ ಮಿಥುನ್ ರೆಡ್ಡಿ ರವರ ಅಭಿಮಾನಿಗಳು ಹಾಜರಿದ್ದರು.